<p><strong>ಬಾಗಲಕೋಟೆ:</strong> ಕಮ್ಮಾರ, ಬಡಿಗ, ಕಂಚುಗಾರ, ಶಿಲ್ಪಿ, ಅಕ್ಕಸಾಲಿ ವೃತ್ತಿಗಳು ಜ್ಞಾನದ ಕೌಶಲ ಹೊಂದಿವೆ. ವಿಶ್ವಕರ್ಮರು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಹರಿಕಾರರಾಗಿದ್ದಾರೆ ಎಂದು ಮುರನಾಳದ ಮಳೆರಾಜೇಂದ್ರಸ್ವಾಮಿ ಮಠದ ನವೀನ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮುರನಾಳ ಪುನರ್ವಸತಿ ಕೇಂದ್ರದಲ್ಲಿ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಪೂಜಾ ಮಹೋತ್ವವ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಜ್ಞಾನವೆಂದರೆ ಭೌತಿಕ ತಿಳಿವಳಿಕೆಯನ್ನು ಸಾಮಾಜಿಕ ವಿವೇಕವನ್ನಾಗಿ ಪರಿವರ್ತಿಸುವುದಾಗಿದೆ ಎಂದರು.</p>.<p>ಜಗತ್ತಿನ ಚೇತನ, ಅಚೇತನಗಳಲ್ಲಿ ಅಸಾಧಾರಣ ಚೈತನ್ಯ ತುಂಬಿ ಮಾನವ ಕುಲದ ಸೌಂದರ್ಯ ಹಾಗೂ ಸ್ಪಾಸ್ಥ್ಯ ಬದುಕಿಗೆ ಕಾರಣವಾಗುತ್ತ ಬಂದವರೇ ವಿಶ್ವಕರ್ಮರಾಗಿದ್ದಾರೆ ಎಂದು ಹೇಳಿದರು.</p>.<p>ಮೌನೇಶ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮನು ತನ್ನ ಸಂಕಲ್ಪ ಮಾತ್ರದಿಂದಲೇ ಸಕಲವನ್ನು ಸೃಷ್ಟಿಸಿದವನು ಎಂದರು.</p>.<p>ಸಾಹಿತಿ ಚಂದ್ರಶೇಖರ ಕಾಳನ್ನವರ ಮಾತನಾಡಿ, ಶಿಲ್ಪಗಳು, ಅರಮನೆ, ಕೋಟೆಗಳು ಶಿಲ್ಪಿಯ ವೈಯಕ್ತಿಕ ಕಲೆ ಪ್ರದರ್ಶನದ ಜೊತೆಗೆ ಒಂದು ಜನಾಂಗದ, ಒಂದು ಕಾಲ ಧರ್ಮದ, ಒಂದು ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಹೇಳಿದರು.</p>.<p>ಸಮಾಜದ ಹಿರಿಯ ಶಂಕ್ರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಹುಚ್ಚಪ್ಪ ಶಿರೂರ, ರಾಮಣ್ಣ ಗಣಿ, ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಅಶೋಕ ಪತ್ತಾರ, ಚಂದ್ರಶೇಖರ ಪತ್ತಾರ, ರುಕ್ಮಣ್ಣ ಪತ್ತಾರ, ಗಂಗಾಧರ ಬಡಿಗೇರ, ನಾರಾಯಣ ಬಡಿಗೇರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಕಮ್ಮಾರ, ಬಡಿಗ, ಕಂಚುಗಾರ, ಶಿಲ್ಪಿ, ಅಕ್ಕಸಾಲಿ ವೃತ್ತಿಗಳು ಜ್ಞಾನದ ಕೌಶಲ ಹೊಂದಿವೆ. ವಿಶ್ವಕರ್ಮರು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಹರಿಕಾರರಾಗಿದ್ದಾರೆ ಎಂದು ಮುರನಾಳದ ಮಳೆರಾಜೇಂದ್ರಸ್ವಾಮಿ ಮಠದ ನವೀನ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮುರನಾಳ ಪುನರ್ವಸತಿ ಕೇಂದ್ರದಲ್ಲಿ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಪೂಜಾ ಮಹೋತ್ವವ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಜ್ಞಾನವೆಂದರೆ ಭೌತಿಕ ತಿಳಿವಳಿಕೆಯನ್ನು ಸಾಮಾಜಿಕ ವಿವೇಕವನ್ನಾಗಿ ಪರಿವರ್ತಿಸುವುದಾಗಿದೆ ಎಂದರು.</p>.<p>ಜಗತ್ತಿನ ಚೇತನ, ಅಚೇತನಗಳಲ್ಲಿ ಅಸಾಧಾರಣ ಚೈತನ್ಯ ತುಂಬಿ ಮಾನವ ಕುಲದ ಸೌಂದರ್ಯ ಹಾಗೂ ಸ್ಪಾಸ್ಥ್ಯ ಬದುಕಿಗೆ ಕಾರಣವಾಗುತ್ತ ಬಂದವರೇ ವಿಶ್ವಕರ್ಮರಾಗಿದ್ದಾರೆ ಎಂದು ಹೇಳಿದರು.</p>.<p>ಮೌನೇಶ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮನು ತನ್ನ ಸಂಕಲ್ಪ ಮಾತ್ರದಿಂದಲೇ ಸಕಲವನ್ನು ಸೃಷ್ಟಿಸಿದವನು ಎಂದರು.</p>.<p>ಸಾಹಿತಿ ಚಂದ್ರಶೇಖರ ಕಾಳನ್ನವರ ಮಾತನಾಡಿ, ಶಿಲ್ಪಗಳು, ಅರಮನೆ, ಕೋಟೆಗಳು ಶಿಲ್ಪಿಯ ವೈಯಕ್ತಿಕ ಕಲೆ ಪ್ರದರ್ಶನದ ಜೊತೆಗೆ ಒಂದು ಜನಾಂಗದ, ಒಂದು ಕಾಲ ಧರ್ಮದ, ಒಂದು ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಹೇಳಿದರು.</p>.<p>ಸಮಾಜದ ಹಿರಿಯ ಶಂಕ್ರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಹುಚ್ಚಪ್ಪ ಶಿರೂರ, ರಾಮಣ್ಣ ಗಣಿ, ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಅಶೋಕ ಪತ್ತಾರ, ಚಂದ್ರಶೇಖರ ಪತ್ತಾರ, ರುಕ್ಮಣ್ಣ ಪತ್ತಾರ, ಗಂಗಾಧರ ಬಡಿಗೇರ, ನಾರಾಯಣ ಬಡಿಗೇರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>