ಮತದಾರರ ಜಾಗೃತಿ ಕರಪತ್ರಗಳನ್ನು ವಧು-ವರರಿಗೆ ನೀಡುವುದರೊಂದಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮತದಾರರಿಗೆ ಮೇ 10 ರಂದು ಜರುಗುವ ಮತದಾನ ದಿನ ತಪ್ಪದೇ ಮತದಾನ ಮಾಡುವಂತೆ ತಿಳಿಸಲಾಯಿತು. ಮತದಾನ ಸಂದರ್ಭ ತೆಗೆದುಕೊಂಡ ಹೋಗಬೇಕಾದ ದಾಖಲೆಗಳು, ಸಹಾಯವಾಣಿ, ದೂರು ನಿರ್ವಹಣಾ ಸಂಖ್ಯೆ, ವಿ-ವಿಜಿಲ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಮತದಾರರಿಗೆ ಹೇಳಲಾಯಿತು.
ಪುರಸಭೆ ಮುಖ್ಯಾಧಿಕಾರಿ ಜಗದೀಶ್ ಈಟಿ, ಚುನಾವಣೆ ಸೆಕ್ಟರ್ ಅಧಿಕಾರಿಗಳಾದ ರಾಜಕುಮಾರ ಸರಿಕರ, ಎನ್.ಎ.ಲಮಾಣಿ, ಸಿ.ಎಸ್.ಮಠಪತಿ ಇತರರು ಇದ್ದರು.