ಸಮೀಪದ ಹೂಲಗೇರಿ ಗ್ರಾಮಕ್ಕೆ ಶನಿವಾರ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಲೋಕಾರ್ಪಣೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೀಘ್ರದಲ್ಲಿ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲಾಗುವುದು. ಐಹೊಳೆಯ ದುರಸ್ತಿಯಲ್ಲಿರುವ ಶಿಲ್ಪ ಕಲೆಗಳನ್ನು ಅಭಿವೃದ್ಧಿ ಹಾಗೂ ಅವುಗಳ ಸಂರಕ್ಷಣೆ ಮಾಡಲಾಗುವುದು. ಐಹೊಳೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತ್ರೀಸ್ಟಾರ್ ಹೋಟೆಲ್ ಪ್ರಾರಂಭಿಸಲಾಗುವುದು. ಐಹೊಳೆ ಜನರ ಸ್ಥಳಾಂತರಕ್ಕೆ ಸರ್ಕಾರ ಇಗಾಗಲೆ ಸ್ಥಳವನ್ನು ಗುರುತಿಸಲಾಗಿದೆ’ ಎಂದರು.