<p>ಬಾಗಲಕೋಟೆ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದು ಬರೀ ಭಾಷೆಯಲ್ಲ; ಶ್ರೇಷ್ಠ ಸಂಸ್ಕೃತಿಯ ಪ್ರತೀಕ ಎಂದು ಅಮೆರಿಕದ ನ್ಯೂಜೆರ್ಸಿಯ 'ಸಾಹಿತ್ಯ ಸುಧೆ- ಕನ್ನಡ ಸಾಹಿತ್ಯ ವೇದಿಕೆ'ಯ ಸರಿತಾ ನವಲಿ ಹೇಳಿದರು.</p>.<p>'ಕನ್ನಡ ಕಾಯಕ ವರ್ಷ'ದ ಅಂಗವಾಗಿ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 'ಕನ್ನಡ ಭಾಷಾ ಬೆಳವಣಿಗೆ ಮತ್ತು ತಂತ್ರಜ್ಞಾನ' ಕುರಿತ ವೆಬಿನಾರ್ದಲ್ಲಿ ಮಾತನಾಡಿದರು.</p>.<p>ನಿರಂತರವಾಗಿ ಬೆಳವಣಿಗೆ ಸಾಧಿಸಿದರೆ ಮಾತ್ರ ಯಾವುದೇ ಭಾಷೆ ಮುಂದುವರಿಯಲು ಸಾಧ್ಯ. ಮೊದಲು, ಒಂದು ಭಾಷೆಯ ಉಳಿವು ಆ ಭಾಷೆಯನ್ನು ಮಾತನಾಡುವವರನ್ನು ಅವಲಂಬಿಸಿತ್ತು. ಈಗ, ಆ ಭಾಷೆ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದಿದೆ ಎಂಬುದು ಪ್ರಧಾನವಾಗಿದೆ. ಹಲವು ಕನ್ನಡ ತಂತ್ರಾಂಶ, ಅಪ್ಲಿಕೇಶನ್ಗಳು ಬಳಕೆಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.</p>.<p>ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವಲ್ಲಿ, ಕನ್ನಡದ ಹಿರಿಮೆ ಪರಿಚಯಿಸಲು ಕನ್ನಡ ಸಂಘಗಳ ಪಾತ್ರ ದೊಡ್ಡದು ಎಂದರು.</p>.<p>ಪ್ರಸಾರಂಗದ ಸಹಾಯಕ ನಿರ್ದೇಶಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಜಾಗತೀಕರಣದ ಈ ಸಂದರ್ಭದಲ್ಲಿ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಂಡು ಉಳಿದ ಜಾಗತಿಕ ಭಾಷೆಗಳ ಜೊತೆಗೆ ಆತ್ಮವಿಶ್ವಾಸದಿಂದ ಸಾಗಬೇಕಿದೆ ಎಂದರು.</p>.<p>ಸಂಸ್ಥೆಯ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯೆ ಡಾ. ವಿ.ಎಸ್.ಮಠ, ವಿಭಾಗ ಮುಖ್ಯಸ್ಥೆ ಡಾ. ಎಸ್.ಜಿ.ನಾವಲಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದು ಬರೀ ಭಾಷೆಯಲ್ಲ; ಶ್ರೇಷ್ಠ ಸಂಸ್ಕೃತಿಯ ಪ್ರತೀಕ ಎಂದು ಅಮೆರಿಕದ ನ್ಯೂಜೆರ್ಸಿಯ 'ಸಾಹಿತ್ಯ ಸುಧೆ- ಕನ್ನಡ ಸಾಹಿತ್ಯ ವೇದಿಕೆ'ಯ ಸರಿತಾ ನವಲಿ ಹೇಳಿದರು.</p>.<p>'ಕನ್ನಡ ಕಾಯಕ ವರ್ಷ'ದ ಅಂಗವಾಗಿ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 'ಕನ್ನಡ ಭಾಷಾ ಬೆಳವಣಿಗೆ ಮತ್ತು ತಂತ್ರಜ್ಞಾನ' ಕುರಿತ ವೆಬಿನಾರ್ದಲ್ಲಿ ಮಾತನಾಡಿದರು.</p>.<p>ನಿರಂತರವಾಗಿ ಬೆಳವಣಿಗೆ ಸಾಧಿಸಿದರೆ ಮಾತ್ರ ಯಾವುದೇ ಭಾಷೆ ಮುಂದುವರಿಯಲು ಸಾಧ್ಯ. ಮೊದಲು, ಒಂದು ಭಾಷೆಯ ಉಳಿವು ಆ ಭಾಷೆಯನ್ನು ಮಾತನಾಡುವವರನ್ನು ಅವಲಂಬಿಸಿತ್ತು. ಈಗ, ಆ ಭಾಷೆ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದಿದೆ ಎಂಬುದು ಪ್ರಧಾನವಾಗಿದೆ. ಹಲವು ಕನ್ನಡ ತಂತ್ರಾಂಶ, ಅಪ್ಲಿಕೇಶನ್ಗಳು ಬಳಕೆಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.</p>.<p>ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವಲ್ಲಿ, ಕನ್ನಡದ ಹಿರಿಮೆ ಪರಿಚಯಿಸಲು ಕನ್ನಡ ಸಂಘಗಳ ಪಾತ್ರ ದೊಡ್ಡದು ಎಂದರು.</p>.<p>ಪ್ರಸಾರಂಗದ ಸಹಾಯಕ ನಿರ್ದೇಶಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಜಾಗತೀಕರಣದ ಈ ಸಂದರ್ಭದಲ್ಲಿ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಂಡು ಉಳಿದ ಜಾಗತಿಕ ಭಾಷೆಗಳ ಜೊತೆಗೆ ಆತ್ಮವಿಶ್ವಾಸದಿಂದ ಸಾಗಬೇಕಿದೆ ಎಂದರು.</p>.<p>ಸಂಸ್ಥೆಯ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯೆ ಡಾ. ವಿ.ಎಸ್.ಮಠ, ವಿಭಾಗ ಮುಖ್ಯಸ್ಥೆ ಡಾ. ಎಸ್.ಜಿ.ನಾವಲಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>