<p><strong>ಬಾಗಲಕೋಟೆ:</strong> ವಿಶ್ವ ಮಹಿಳಾ ದಿನಕ್ಕೆ ಮುನ್ನುಡಿ ಬರೆಯಲು ಇಲ್ಲಿನ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪುರುಷರ ಅಡಿಗೆ ಸ್ಪರ್ಧೆಯಲ್ಲಿ ನಳ ಮಹಾರಾಜರು ಗಮ್ಮತ್ತು ಮೆರೆದರು.</p>.<p>ಪಾತ್ರೆ ತೊಳೆದುಕೊಂಡು, ಸ್ಟೋವ್ ಹಚ್ಚಿಕೊಂಡು ಕಣ್ಣಲ್ಲಿ ನೀರು ಸುರಿಸಿಕೊಳ್ಳುತ್ತಾ ಈರುಳ್ಳಿ ಸೇರಿದಂತೆ ಬೇರೆ ಬೇರೆ ತರಕಾರಿ ಹೆಚ್ಚಿಕೊಂಡು ಇಂಗು-ತೆಂಗಿನ ವಗ್ಗರಣೆ ಹಾಕಿದರು. ಹಿಟ್ಟು ಕಲಸಿದರು. ಕುಕ್ಕರ್ ಕೂಗಿಸಿ ವಿವಿಧ ಬಾತ್ ಗಳನ್ನು ಮಾಡಿದರು.</p>.<p>ಅಡುಗೆ ಮಾಡಲು ಒಂದು ತಾಸು ಸಮಯ ನಿಗದಿಗೊಳಿಸಲಾಗಿತ್ತು. ಹೋಳಿಗೆ ಕಡುಬು, ಉಪ್ಪಿಟ್ಟು, ಜಾಮೂನು, ಕಟ್ಲೆಟ್, ಈರುಳ್ಳಿ ಬಜಿ, ಮೈಸೂರು ಬಜಿ, ಫ್ರೈಡ್ ರೈಸ್, ಶಾವಿಗೆ ಪಾಯಸ, ಎಗ್ ಪುಲಾವ್ ಹೀಗೆ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳನ್ನು ಮಾಡಿದರು.</p>.<p>ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅಡುಗೆ ಸ್ಪರ್ಧೆಗೆ ಚಾಲನೆ ನೀಡಿದರು.</p>.<p>ಮಹಿಳಾ ಮತ್ತು ಮಕ್ಜಳ ಅಭಿವೃದ್ಧಿ ಇಲಾಖೆಯ ಸಿಡಿಪಿಒಗಳಾದ ಅನ್ನಪೂರ್ಣ ಕುಬಕಟ್ಟಿ, ಮೌನೇಶ್ವರಿ ಹಾಗೂ ಹೇಮಾವತಿ ತೀರ್ಪುಗಾರರಾಗಿ ಕೆಲಸ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ವಿಶ್ವ ಮಹಿಳಾ ದಿನಕ್ಕೆ ಮುನ್ನುಡಿ ಬರೆಯಲು ಇಲ್ಲಿನ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪುರುಷರ ಅಡಿಗೆ ಸ್ಪರ್ಧೆಯಲ್ಲಿ ನಳ ಮಹಾರಾಜರು ಗಮ್ಮತ್ತು ಮೆರೆದರು.</p>.<p>ಪಾತ್ರೆ ತೊಳೆದುಕೊಂಡು, ಸ್ಟೋವ್ ಹಚ್ಚಿಕೊಂಡು ಕಣ್ಣಲ್ಲಿ ನೀರು ಸುರಿಸಿಕೊಳ್ಳುತ್ತಾ ಈರುಳ್ಳಿ ಸೇರಿದಂತೆ ಬೇರೆ ಬೇರೆ ತರಕಾರಿ ಹೆಚ್ಚಿಕೊಂಡು ಇಂಗು-ತೆಂಗಿನ ವಗ್ಗರಣೆ ಹಾಕಿದರು. ಹಿಟ್ಟು ಕಲಸಿದರು. ಕುಕ್ಕರ್ ಕೂಗಿಸಿ ವಿವಿಧ ಬಾತ್ ಗಳನ್ನು ಮಾಡಿದರು.</p>.<p>ಅಡುಗೆ ಮಾಡಲು ಒಂದು ತಾಸು ಸಮಯ ನಿಗದಿಗೊಳಿಸಲಾಗಿತ್ತು. ಹೋಳಿಗೆ ಕಡುಬು, ಉಪ್ಪಿಟ್ಟು, ಜಾಮೂನು, ಕಟ್ಲೆಟ್, ಈರುಳ್ಳಿ ಬಜಿ, ಮೈಸೂರು ಬಜಿ, ಫ್ರೈಡ್ ರೈಸ್, ಶಾವಿಗೆ ಪಾಯಸ, ಎಗ್ ಪುಲಾವ್ ಹೀಗೆ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳನ್ನು ಮಾಡಿದರು.</p>.<p>ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅಡುಗೆ ಸ್ಪರ್ಧೆಗೆ ಚಾಲನೆ ನೀಡಿದರು.</p>.<p>ಮಹಿಳಾ ಮತ್ತು ಮಕ್ಜಳ ಅಭಿವೃದ್ಧಿ ಇಲಾಖೆಯ ಸಿಡಿಪಿಒಗಳಾದ ಅನ್ನಪೂರ್ಣ ಕುಬಕಟ್ಟಿ, ಮೌನೇಶ್ವರಿ ಹಾಗೂ ಹೇಮಾವತಿ ತೀರ್ಪುಗಾರರಾಗಿ ಕೆಲಸ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>