’ವಿಷಪ್ರಾಶನ ಪ್ರಕರಣ ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಸೂಕ್ತ ಕ್ರಮಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನು. ಘಟನೆಯ ನಂತರ ನಾವು ಕೈಗೊಂಡ ಕ್ರಮಗಳ ಬಗ್ಗೆ ಕೇಳುವುದು ಬಿಟ್ಟು ಮಾಧ್ಯಮದವರು, 48 ಗಂಟೆ ಲೇಟಾಗಿ ಬಂದಿರಿ ಎಂದು ಕೇಳುತ್ತಾರೆ. ಪ್ರಕರಣ ನನ್ನ ಗಮನಕ್ಕೆ ಬಂದಿದ್ದು ಮೊನ್ನೆ ಎಂದು ಹೇಳುವ ಬದಲು, ಬಾಯಿ ತಪ್ಪಿ ನಿನ್ನೆ ಎಂದಿದ್ದೇನೆ. ಅದನ್ನೇ ತಿರುಚಿ ನಾನು ಉಡಾಫೆ ಮಂತ್ರಿ ಎಂದು ಹೇಳಿದ್ದು ನನಗೆ ತೀವ್ರ ನೋವು ತರಿಸಿದೆ’ ಎಂದರು.