ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಳಗಳ ದಾಳಿ: 12 ಕುರಿಮರಿ ಸಾವು

Published 22 ಜುಲೈ 2023, 13:32 IST
Last Updated 22 ಜುಲೈ 2023, 13:32 IST
ಅಕ್ಷರ ಗಾತ್ರ

ಕುರುಗೋಡು: ಸಮೀಪದ ದರೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ತೋಳಗಳ ಗುಂಪು ನಡೆಸಿದ ದಾಳಿಯಲ್ಲಿ 12 ಕುರಿ ಮರಿಗಳು ಮೃತಪಟ್ಟಿವೆ.

ಬೆಳಗಾವಿ ಜಿಲ್ಲೆಯ ಯಮಗರಣಿ ಗ್ರಾಮದ ಸಿದ್ದಪ್ಪನಿಗೆ ಎಂಬುವರಿಗೆ ಸೇರಿದ 100ಕ್ಕೂ ಅಧಿಕ ಕುರಿ ಮರಿಗಳನ್ನು ಕುರುಗೋಡು ಹೊರ ವಲಯದ ಕುರಿಹಟ್ಟಿಯಲ್ಲಿ ಬಿಟ್ಟಿದ್ದರು.

ಕುರಿಗಾಹಿ ಸಿದ್ದಪ್ಪ ಪ್ರತಿಕ್ರಿಯಿಸಿ, ‘ಕುರಿ ಮರಿಗಳನ್ನು ಬೆಳೆಸಿ ಮಾರಾಟಮಾಡುವ ಕಾಯಕ ನಮ್ಮದು. ಮೂರು ತಿಂಗಳು ತುಂಬಿದ 100 ಕುರಿಮರಿಗಳಲ್ಲಿ 12 ಮರಿಗಳನ್ನು ತೋಳಗಳು ಸಾಯಿಸಿವೆ. ಇದರಿಂದ ₹65 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ’ ಎಂದರು.

ಪಶು ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT