ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಬಾಚಿಗೊಂಡನಹಳ್ಳಿ ಬಳಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಹಾದು ಹೋದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿದ್ಯುತ್ ಸ್ಪರ್ಶದಿಂದ ನಾಲ್ಕು ರಾಜಹಂಸ ಪಕ್ಷಿಗಳು (ಗ್ರೇಟ್ ಫ್ಲೆಮಿಂಗೊ) ಗುರುವಾರ ಸಾವನ್ನಪ್ಪಿವೆ.
ಪ್ರತಿ ವರ್ಷ ಹಕ್ಕಿಗಳ ವಲಸೆ ಸಂದರ್ಭದಲ್ಲಿ ಈ ಅವಘಡ ಸಂಭವಿಸುತ್ತದೆ. ಬಾನಾಡಿಗಳು ಆಹಾರ ಅರಸಿ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ತಂಡೋಪತಂಡವಾಗಿ ಬರುತ್ತಿವೆ. ಆದರೆ, ಬರುವ ಧಾವಂತದಲ್ಲಿ ಹೈಟೆನ್ಷನ್ ಲೈನ್ ಮೂಲಕ ಹಾದು ಹೋಗುವ ಹಕ್ಕಿಗಳು ವಿದ್ಯುತ್ ಶಾಕ್ನಿಂದಾಗಿ ಪ್ರಾಣಬಿಡುತ್ತಿವೆ.
‘ಪಕ್ಷಿಗಳಿಗೆ ತೊಂದರೆ ಆಗದಂತೆ ವೈಜ್ಞಾನಿಕವಾಗಿ ವಿದ್ಯುತ್ ಲೈನ್ಗಳಿಗೆ ಬೆಳಕಿನ ಫಲಕ (ರಿಫ್ಲೆಕ್ಟರ್) ಅಳವಡಿಸಬೇಕು. ಇದರಿಂದ ಅವಘಡ ತಪ್ಪಿಸಬಹುದು. ಕಳೆದ ನವೆಂಬರ್ ತಿಂಗಳಲ್ಲಿ 20ಕ್ಕೂ ಹೆಚ್ಚು ಪಕ್ಷಿಗಳು ಒಂದು ವಾರದಲ್ಲಿ ಸಾವನ್ನಪ್ಪಿದ್ದವು‘ ಎಂದು ಪಕ್ಷಿ ಪ್ರೇಮಿ ಮಹೇಶ್ವರ ಹುರುಕಡ್ಲಿ ತಿಳಿಸಿದ್ದಾರೆ.
ವಿದ್ಯುತ್ ತಂತಿಗಳಿಗೆ ತಗುಲಿ ರಾಜಹಂಸ(ಗ್ರೇಟ್ ಫ್ಲೆಮಿಂಗೊ) ಪಕ್ಷಿಗಳು ಸಾವನ್ನಪ್ಪಿರುವುದು