ಕಾದ ಕೆಂಡದಂತಿರುವ ಸೂರ್ಯನ ಪ್ರತಾಪಕ್ಕೆ ಗಣಿನಾಡು ಬಳ್ಳಾರಿ ಜನತೆ ಬಸವಳಿದು ಹೋಗಿದ್ದಾರೆ.ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯನ ಪಾಡೇ ಹೀಗಿದ್ದರೆ ಶ್ವಾನಗಳ ಪಾಡು ಇನ್ಹೇಗಿರುತ್ತೆ? ಅದಕ್ಕೆ ಬಳ್ಳಾರಿಯ ಪೊಲೀಸರು ತಮ್ಮ ಇಲಾಖೆಯ ಶ್ವಾನಗಳನ್ನ ಬಿಸಿಲಿನಿಂದ ತಣ್ಣಗಿಡಲು ನಿರ್ಧರಿಸಿದ್ದಾರೆ. ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಶ್ವಾನಗಳಿಗೆ ಕೂಲರ್ ವ್ಯವಸ್ಥೆ ಮಾಡಲಾಗಿದೆ.ಇದೀಗ ಪೊಲೀಸ್ ಡಾಗ್ಸ್ ಫುಲ್ ಕೂಲ್ ಕೂಲ್...!