<p><strong>ಸಿರುಗುಪ್ಪ</strong>: ತಾಲ್ಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ನಾಲ್ಕು ಮನೆಗಳು ಭಾಗಶಃ ಕುಸಿದು ಬಿದ್ದ ಘಟನೆ ನಡೆದಿದೆ.</p>.<p>ಬಾಗೇವಾಡಿ ಗ್ರಾಮದ ಈರಣ್ಣ, ಸಿದ್ದಪ್ಪ, ಹಳೇಕೋಟೆಯ ಶಾರದಾ ಬಸವನಗೌಡ, ಹಂಪಮ್ಮ ಬೊಮ್ಮಣ್ಣ ಅವರ ಮನೆಗಳು ಭಾಗಶಃ ಮನೆಗಳು ಹಾನಿಯಾಗಿವೆ ಎಂದು ತಾಲ್ಲೂಕು ಆಡಳಿತಾಧಿಕಾರಿಗಳು ಮಾಹಿತಿ ನೀಡಿದರು.</p>.<p>ನಾಗರಹಾಳು, ಅಲಬನೂರು ಗ್ರಾಮಗಳ ಸುತ್ತಮುತ್ತ ಸುರಿದ ಬಾರಿ ಮಳೆಯಿಂದಾಗಿ ತುಂಬಿ ಹರಿದ ಕೋಳ್ಳಿ ಹಳ್ಳದ ನೀರು ಹತ್ತಿ ಬೆಳೆಗಳ ಜಮೀನುಗಳಿಗೆ ನುಗ್ಗಿದೆ. ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಚರಿಸಿದರು.</p>.<p>ಸಿರುಗುಪ್ಪ -19.4 ಮಿ.ಮೀ, ತೆಕ್ಕಲಕೋಟೆ -15.8 ಮಿ.ಮೀ, ಸಿರಿಗೇರಿ- 5.2 ಮೀ.ಮೀ, ಎಂ.ಸೂಗುರು- 12.2 ಮಿ.ಮೀ, ಹಚ್ಚೋಳ್ಳಿ - 24.8 ಮಿ.ಮೀ, ರಾವಿಹಾಳ್ -21.4 ಮಿ.ಮೀ, ಕರೂರು-13.8 ಮಿ.ಮೀ, ಬೇಳಗಲ್ಲು-15.4 ಮೀ.ಮೀ ಮಳೆಯಾಗಿದೆ.</p>.<p>‘ಪ್ರತಿಬಾರಿ ಮಳೆಯಾದರೆ ಕೋಳ್ಳಿ ಹಳ್ಳವು ತುಂಬಿ ಹರಿಯುತಿದ್ದು, ಸೇತುವೆಯನ್ನು ಎತ್ತರಕ್ಕೆ ನಿರ್ಮಿಸುವಂತೆ ಅನೇಕ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಗಡಿಗ್ರಾಮಗಳು ಆಗಿರುವುದರಿಂದ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರಾದ ಖಾಜಾಹುಸೆನ್ಸಾಬ್ ಡಿ., ಎಚ್. ಹನುಮಂತ, ಗಾಜೀನಾಳು ಹೊನ್ನೂರ್ ಸಾಬ್ ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: ತಾಲ್ಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ನಾಲ್ಕು ಮನೆಗಳು ಭಾಗಶಃ ಕುಸಿದು ಬಿದ್ದ ಘಟನೆ ನಡೆದಿದೆ.</p>.<p>ಬಾಗೇವಾಡಿ ಗ್ರಾಮದ ಈರಣ್ಣ, ಸಿದ್ದಪ್ಪ, ಹಳೇಕೋಟೆಯ ಶಾರದಾ ಬಸವನಗೌಡ, ಹಂಪಮ್ಮ ಬೊಮ್ಮಣ್ಣ ಅವರ ಮನೆಗಳು ಭಾಗಶಃ ಮನೆಗಳು ಹಾನಿಯಾಗಿವೆ ಎಂದು ತಾಲ್ಲೂಕು ಆಡಳಿತಾಧಿಕಾರಿಗಳು ಮಾಹಿತಿ ನೀಡಿದರು.</p>.<p>ನಾಗರಹಾಳು, ಅಲಬನೂರು ಗ್ರಾಮಗಳ ಸುತ್ತಮುತ್ತ ಸುರಿದ ಬಾರಿ ಮಳೆಯಿಂದಾಗಿ ತುಂಬಿ ಹರಿದ ಕೋಳ್ಳಿ ಹಳ್ಳದ ನೀರು ಹತ್ತಿ ಬೆಳೆಗಳ ಜಮೀನುಗಳಿಗೆ ನುಗ್ಗಿದೆ. ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಚರಿಸಿದರು.</p>.<p>ಸಿರುಗುಪ್ಪ -19.4 ಮಿ.ಮೀ, ತೆಕ್ಕಲಕೋಟೆ -15.8 ಮಿ.ಮೀ, ಸಿರಿಗೇರಿ- 5.2 ಮೀ.ಮೀ, ಎಂ.ಸೂಗುರು- 12.2 ಮಿ.ಮೀ, ಹಚ್ಚೋಳ್ಳಿ - 24.8 ಮಿ.ಮೀ, ರಾವಿಹಾಳ್ -21.4 ಮಿ.ಮೀ, ಕರೂರು-13.8 ಮಿ.ಮೀ, ಬೇಳಗಲ್ಲು-15.4 ಮೀ.ಮೀ ಮಳೆಯಾಗಿದೆ.</p>.<p>‘ಪ್ರತಿಬಾರಿ ಮಳೆಯಾದರೆ ಕೋಳ್ಳಿ ಹಳ್ಳವು ತುಂಬಿ ಹರಿಯುತಿದ್ದು, ಸೇತುವೆಯನ್ನು ಎತ್ತರಕ್ಕೆ ನಿರ್ಮಿಸುವಂತೆ ಅನೇಕ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಗಡಿಗ್ರಾಮಗಳು ಆಗಿರುವುದರಿಂದ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರಾದ ಖಾಜಾಹುಸೆನ್ಸಾಬ್ ಡಿ., ಎಚ್. ಹನುಮಂತ, ಗಾಜೀನಾಳು ಹೊನ್ನೂರ್ ಸಾಬ್ ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>