‘ಹಕ್ಕುಸ್ವಾಮ್ಯತೆ ಕುರಿತು ಅಧಿಕೃತ ದಾಖಲೆಗಳ ಮೂಲಕ ಅವರು ಮೊದಲು ನಿರೂಪಿಸಬೇಕು. ನಂತರ ಆರೋಪ ಮಾಡಬೇಕು. ಆದರೆ, ಇದುವರೆಗೆ ಅವರು ಅದನ್ನು ನಿರೂಪಿಸಿಲ್ಲ. ಹರಿಹರಪ್ರಿಯ ಅವರು ಕುವೆಂಪು ಅವರ 62 ಪತ್ರಗಳ ಪುಸ್ತಕದ ಸಂಪಾದಕರಾಗಿದ್ದಾರೆ ಹೊರತು ಪತ್ರಗಳ ಲೇಖಕರಲ್ಲ. ಕುವೆಂಪು ಅವರು ಬರೆದ 62 ಪತ್ರಗಳನ್ನು ತಿದ್ದುಪಡಿ ಮಾಡದೆ ಯಥಾವತ್ತಾಗಿ ವಿಶ್ವವಿದ್ಯಾಲಯ ಪ್ರಕಟಿಸಿದೆ ಎನ್ನುವುದು ಅವರ ಆರೋಪ. ಅದನ್ನು ವಿಶ್ವವಿದ್ಯಾಲಯವೂ ಒಪ್ಪಿಕೊಂಡಿದೆ’ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.