<p><strong>ಕುರುಗೋಡು:</strong> ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ವಿಜೃಂಭಣೆಯಿಂದ ದೀಪೋತ್ಸವ ಜರುಗಿತು.</p>.<p>ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರುದ್ರಹೋಮ ಜರುಗಿತು. ಬುಕ್ಕಸಾಗರದ ವಿಶ್ವನಾಥ ಸ್ವಾಮಿ ಮತ್ತು ತಂಡ ರುದ್ರಹೋಮದ ಪೌರೋಹಿತ್ಯ ನೆರವೇರಿಸಿದರು.</p>.<p>ದೇವಸ್ಥಾನದಲ್ಲಿ ಸಂಜೆ ಮಹಾಮಂಗಳಾರತಿ ನೆರವೇರುತ್ತಿದ್ದಂತೆ ದೊಡ್ಡಬಸವೇಶ್ವರ ಸ್ವಾಮಿ ಪಲ್ಲಕ್ಕಿ ಮೆರವಣಿಗೆ ನೀಲಮ್ಮನ ಮಠಕ್ಕೆ ತೆರಳಿ, ಸ್ವಸ್ಥಳಕ್ಕೆ ಮರಳುತ್ತಿದ್ದಂತೆ ಹೋಮ ಹವನ ಜರುಗಿತು. ಮಂತ್ರಘೋಷ ಮೊಳಗಿದವು. ಮಂಗಳ ವಾದ್ಯಗಳ ಸದ್ದಿನೊಂದಿಗೆ ದೀಪೋತ್ಸವಕ್ಕೆ ಚಾಲನೆ ದೊರೆಯಿತು.</p>.<p>ಪಟ್ಟಣವೂ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರು ವೈಭವದ ಲಕ್ಷದೀಪೋತ್ಸವ ಸೊಬಗು ಕಣ್ತುಂಬಿಕೊಂಡರು. ಸ್ವಾಮಿಗೆ ಜಯಕಾರ ಕೂಗಿದರು.</p>.<p>ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್. ಗಣೇಶ್, ‘ಮನುಷ್ಯರಲ್ಲಿನ ಅಜ್ಞಾನದ ಅಂಧಕಾರ ಕಳೆದ ಸುಜ್ಞಾನದ ಬೆಳಕು ಹರಿಸುವ ಗುಣ ದೀಪೋತ್ಸವ ಹೊಂದಿದೆ. ನಾಡಿನ ರೈತಾಪಿ ವರ್ಗ ಖುಷಿಯಾಗಿರಲಿ ಎಲ್ಲರ ಬದುಕು ಹಸನಾಗಲಿ ಎನ್ನುವ ಸದುದ್ದೇಶದಿಂದ ದೀಪೋತ್ಸವ ಆಯೋಜಿಸಲಾಗಿದೆ’ ಎಂದರು.</p>.<p>ದೀಪೋತ್ಸವದ ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಾನಾಳು ಆನಂದ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿ.ಹನುಮಂತಪ್ಪ, ಎಸ್.ಪ್ರಭುಲಿಂಗಯ್ಯ ಸ್ವಾಮಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ವಿಜೃಂಭಣೆಯಿಂದ ದೀಪೋತ್ಸವ ಜರುಗಿತು.</p>.<p>ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರುದ್ರಹೋಮ ಜರುಗಿತು. ಬುಕ್ಕಸಾಗರದ ವಿಶ್ವನಾಥ ಸ್ವಾಮಿ ಮತ್ತು ತಂಡ ರುದ್ರಹೋಮದ ಪೌರೋಹಿತ್ಯ ನೆರವೇರಿಸಿದರು.</p>.<p>ದೇವಸ್ಥಾನದಲ್ಲಿ ಸಂಜೆ ಮಹಾಮಂಗಳಾರತಿ ನೆರವೇರುತ್ತಿದ್ದಂತೆ ದೊಡ್ಡಬಸವೇಶ್ವರ ಸ್ವಾಮಿ ಪಲ್ಲಕ್ಕಿ ಮೆರವಣಿಗೆ ನೀಲಮ್ಮನ ಮಠಕ್ಕೆ ತೆರಳಿ, ಸ್ವಸ್ಥಳಕ್ಕೆ ಮರಳುತ್ತಿದ್ದಂತೆ ಹೋಮ ಹವನ ಜರುಗಿತು. ಮಂತ್ರಘೋಷ ಮೊಳಗಿದವು. ಮಂಗಳ ವಾದ್ಯಗಳ ಸದ್ದಿನೊಂದಿಗೆ ದೀಪೋತ್ಸವಕ್ಕೆ ಚಾಲನೆ ದೊರೆಯಿತು.</p>.<p>ಪಟ್ಟಣವೂ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರು ವೈಭವದ ಲಕ್ಷದೀಪೋತ್ಸವ ಸೊಬಗು ಕಣ್ತುಂಬಿಕೊಂಡರು. ಸ್ವಾಮಿಗೆ ಜಯಕಾರ ಕೂಗಿದರು.</p>.<p>ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್. ಗಣೇಶ್, ‘ಮನುಷ್ಯರಲ್ಲಿನ ಅಜ್ಞಾನದ ಅಂಧಕಾರ ಕಳೆದ ಸುಜ್ಞಾನದ ಬೆಳಕು ಹರಿಸುವ ಗುಣ ದೀಪೋತ್ಸವ ಹೊಂದಿದೆ. ನಾಡಿನ ರೈತಾಪಿ ವರ್ಗ ಖುಷಿಯಾಗಿರಲಿ ಎಲ್ಲರ ಬದುಕು ಹಸನಾಗಲಿ ಎನ್ನುವ ಸದುದ್ದೇಶದಿಂದ ದೀಪೋತ್ಸವ ಆಯೋಜಿಸಲಾಗಿದೆ’ ಎಂದರು.</p>.<p>ದೀಪೋತ್ಸವದ ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಾನಾಳು ಆನಂದ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿ.ಹನುಮಂತಪ್ಪ, ಎಸ್.ಪ್ರಭುಲಿಂಗಯ್ಯ ಸ್ವಾಮಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>