<p>ಕಂಪ್ಲಿ: ಪಟ್ಟಣದಲ್ಲಿ ಸಿವಿಲ್ ನ್ಯಾಯಾಲಯ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಇಲ್ಲಿಯ ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್. ಗಣೇಶ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮತ್ತು ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.</p>.<p>ಸಿವಿಲ್ ನ್ಯಾಯಾಲಯ ಆರಂಭಕ್ಕೆ ಆದೇಶವಾಗಿ ಒಂದೂವರೆ ವರ್ಷವಾದರೂ ಇನ್ನೂ ಆರಂಭಗೊಂಡಿಲ್ಲ. ಈ ಕಾರಣದಿಂದ ವಕೀಲರು, ಸಾರ್ವಜನಿಕರು 50 ಕಿ.ಮೀ ದೂರದ ಬಳ್ಳಾರಿ ನ್ಯಾಯಾಲಯಕ್ಕೆ ತೆರಳಬೇಕಿದೆ. ನ್ಯಾಯಾಲಯಕ್ಕಾಗಿ ಕಟ್ಟಡ ಒದಗಿಸಲು ಪುರಸಭೆಯಲ್ಲಿ ಠರಾವ್ ಮಂಡಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದಿದೆ. ಈ ಕುರಿತು ಗಮನಹರಿಸುವಂತೆ ವಕೀಲರು ಶಾಸಕರಿಗೆ ಮನವರಿಕೆ ಮಾಡಿದರು.</p>.<p>ವಕೀಲರ ಬಳಗದ ಕಾರ್ಯಾಧ್ಯಕ್ಷ ಕೆ. ಪ್ರಭಾಕರ ರಾವ್, ಪದಾಧಿಕಾರಿಗಳಾದ ರಘುನಾಥ ರಾವ್, ಎಚ್. ನಾಗರಾಜ, ಹರೀಶ್ ಅಯೋದಿ, ಮರಿಶೆಟ್ರು ವಿಜಯಲಕ್ಷ್ಮಿ, ಅಯ್ಯಪ್ಪ, ರುದ್ರಪ್ಪ, ಜಗದೀಶ, ಟಿ. ಶಿವಪ್ಪ, ಎಚ್. ಹುಲುಗಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ಪಟ್ಟಣದಲ್ಲಿ ಸಿವಿಲ್ ನ್ಯಾಯಾಲಯ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಇಲ್ಲಿಯ ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್. ಗಣೇಶ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮತ್ತು ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.</p>.<p>ಸಿವಿಲ್ ನ್ಯಾಯಾಲಯ ಆರಂಭಕ್ಕೆ ಆದೇಶವಾಗಿ ಒಂದೂವರೆ ವರ್ಷವಾದರೂ ಇನ್ನೂ ಆರಂಭಗೊಂಡಿಲ್ಲ. ಈ ಕಾರಣದಿಂದ ವಕೀಲರು, ಸಾರ್ವಜನಿಕರು 50 ಕಿ.ಮೀ ದೂರದ ಬಳ್ಳಾರಿ ನ್ಯಾಯಾಲಯಕ್ಕೆ ತೆರಳಬೇಕಿದೆ. ನ್ಯಾಯಾಲಯಕ್ಕಾಗಿ ಕಟ್ಟಡ ಒದಗಿಸಲು ಪುರಸಭೆಯಲ್ಲಿ ಠರಾವ್ ಮಂಡಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದಿದೆ. ಈ ಕುರಿತು ಗಮನಹರಿಸುವಂತೆ ವಕೀಲರು ಶಾಸಕರಿಗೆ ಮನವರಿಕೆ ಮಾಡಿದರು.</p>.<p>ವಕೀಲರ ಬಳಗದ ಕಾರ್ಯಾಧ್ಯಕ್ಷ ಕೆ. ಪ್ರಭಾಕರ ರಾವ್, ಪದಾಧಿಕಾರಿಗಳಾದ ರಘುನಾಥ ರಾವ್, ಎಚ್. ನಾಗರಾಜ, ಹರೀಶ್ ಅಯೋದಿ, ಮರಿಶೆಟ್ರು ವಿಜಯಲಕ್ಷ್ಮಿ, ಅಯ್ಯಪ್ಪ, ರುದ್ರಪ್ಪ, ಜಗದೀಶ, ಟಿ. ಶಿವಪ್ಪ, ಎಚ್. ಹುಲುಗಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>