‘ಉತ್ಪಾದನೆಯನ್ನು 20 ದಶಲಕ್ಷ ಟನ್ಗೆ ಇಳಿಸಿ’
ಸ್ಥಳೀಯ ಅದಿರು ಉತ್ಪಾದನೆಯನ್ನು 50 ದಶಲಕ್ಷ ಟನ್ನಿಂದ 20 ದಶಲಕ್ಷ ಟನ್ಗೆ ಇಳಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಮಧ್ಯೆ ಕೇಂದ್ರದ ಉಕ್ಕು ಸಚಿವಾಲಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ) ಅಕ್ರಮವಾಗಿ ತನ್ನ ಉತ್ಪಾದನೆಯನ್ನು 16 ದಶಲಕ್ಷ ಟನ್ಗೆ ಹೆಚ್ಚಿಸಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಈ ಕಂಪನಿಯ ನೇಮಕಾತಿಯಲ್ಲಿ ಮೀಸಲಾತಿ ಜಾರಿಯಾಗಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.