<p><strong>ಹೊಸಪೇಟೆ:</strong> ತಾಲ್ಲೂಕಿನ ಕಡ್ಡಿರಾಂಪುರದಲ್ಲಿ ವಿಷ ಮಿಶ್ರಿತ ಆಹಾರ ತಿಂದು ಅನೇಕ ಪಶು–ಪಕ್ಷಿಗಳು ಪ್ರಾಣ ಬಿಟ್ಟಿವೆ.</p>.<p>ಸ್ಥಳೀಯರ ಪ್ರಕಾರ, 30ಕ್ಕೂ ಹೆಚ್ಚು ಬೀದಿ ನಾಯಿ, 40 ಕಾಗೆ, 70 ಕೋಳಿ, 15 ಸಾಕು ಬೆಕ್ಕು, ಎರಡು ಎಮ್ಮೆ, ನಾಲ್ಕು ಕುರಿಗಳು ಅಸುನೀಗಿವೆ.</p>.<p>‘ಯಾರೊ ಕಿಡಿಗೇಡಿಗಳು ಹಂದಿ ಮಾಂಸದಲ್ಲಿ ವಿಷ ಬೆರೆಸಿ ಗ್ರಾಮದ ಅಲ್ಲಲ್ಲಿ ಭಾನುವಾರ ರಾತ್ರಿ ಎಸೆದು ಹೋಗಿದ್ದಾರೆ. ಅವುಗಳನ್ನು ತಿಂದು ನಾಯಿ ಹಾಗೂ ಇತರೆ ಪ್ರಾಣಿಗಳು ಜೀವ ಬಿಟ್ಟಿವೆ. ಗ್ರಾಮದಲ್ಲಿ ಬ್ಯಾಂಕು ಹಾಗೂ ಅದರ ಎ.ಟಿ.ಎಂ. ಇದೆ. ಹಣ ದೋಚುವುದಕ್ಕಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಗ್ರಾಮದ ಮುಖಂಡ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪಶು ವೈದ್ಯ ಸೇವೆ ಇಲಾಖೆಯ ಸಹಾಯಕ ನಿರ್ದೇಶಕ ಬೆಣ್ಣೆ ಬಸವರಾಜ ಸೇರಿದಂತೆ ಐದು ಜನ ವೈದ್ಯರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ನಾಲ್ಕು ನಾಯಿಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೂರು ನಾಯಿಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.</p>.<p>‘ವಿಷಾಹಾರ ಸೇವಿಸಿ ಪ್ರಾಣಿಗಳು ಜೀವ ಬಿಟ್ಟಿರುವುದು ದೃಢಪಟ್ಟಿದೆ. ಏಕೆ ವಿಷಾಹಾರ ಉಣಿಸಿದರು ಎನ್ನುವುದು ಗೊತ್ತಿಲ್ಲ’ ಎಂದು ಬೆಣ್ಣಿ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ತಾಲ್ಲೂಕಿನ ಕಡ್ಡಿರಾಂಪುರದಲ್ಲಿ ವಿಷ ಮಿಶ್ರಿತ ಆಹಾರ ತಿಂದು ಅನೇಕ ಪಶು–ಪಕ್ಷಿಗಳು ಪ್ರಾಣ ಬಿಟ್ಟಿವೆ.</p>.<p>ಸ್ಥಳೀಯರ ಪ್ರಕಾರ, 30ಕ್ಕೂ ಹೆಚ್ಚು ಬೀದಿ ನಾಯಿ, 40 ಕಾಗೆ, 70 ಕೋಳಿ, 15 ಸಾಕು ಬೆಕ್ಕು, ಎರಡು ಎಮ್ಮೆ, ನಾಲ್ಕು ಕುರಿಗಳು ಅಸುನೀಗಿವೆ.</p>.<p>‘ಯಾರೊ ಕಿಡಿಗೇಡಿಗಳು ಹಂದಿ ಮಾಂಸದಲ್ಲಿ ವಿಷ ಬೆರೆಸಿ ಗ್ರಾಮದ ಅಲ್ಲಲ್ಲಿ ಭಾನುವಾರ ರಾತ್ರಿ ಎಸೆದು ಹೋಗಿದ್ದಾರೆ. ಅವುಗಳನ್ನು ತಿಂದು ನಾಯಿ ಹಾಗೂ ಇತರೆ ಪ್ರಾಣಿಗಳು ಜೀವ ಬಿಟ್ಟಿವೆ. ಗ್ರಾಮದಲ್ಲಿ ಬ್ಯಾಂಕು ಹಾಗೂ ಅದರ ಎ.ಟಿ.ಎಂ. ಇದೆ. ಹಣ ದೋಚುವುದಕ್ಕಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಗ್ರಾಮದ ಮುಖಂಡ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪಶು ವೈದ್ಯ ಸೇವೆ ಇಲಾಖೆಯ ಸಹಾಯಕ ನಿರ್ದೇಶಕ ಬೆಣ್ಣೆ ಬಸವರಾಜ ಸೇರಿದಂತೆ ಐದು ಜನ ವೈದ್ಯರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ನಾಲ್ಕು ನಾಯಿಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೂರು ನಾಯಿಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.</p>.<p>‘ವಿಷಾಹಾರ ಸೇವಿಸಿ ಪ್ರಾಣಿಗಳು ಜೀವ ಬಿಟ್ಟಿರುವುದು ದೃಢಪಟ್ಟಿದೆ. ಏಕೆ ವಿಷಾಹಾರ ಉಣಿಸಿದರು ಎನ್ನುವುದು ಗೊತ್ತಿಲ್ಲ’ ಎಂದು ಬೆಣ್ಣಿ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>