ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ: ಗಣಿ ಬಾಧಿತ ಹಳ್ಳಿಗಳ ಪುನಶ್ಚೇತನ‌ ಮರೆತ ನಿಗಮ

ಕೆಎಂಇಆರ್‌ಸಿ ಸಂಡೂರು ಸಭೆ l ಜನಕೇಂದ್ರಿತ ಬದಲಿಗೆ ನಿರ್ಮಾಣ ಕೇಂದ್ರಿತ ಯೋಜನೆಗೆ ಸಮ್ಮತಿ
Published : 12 ಏಪ್ರಿಲ್ 2025, 6:28 IST
Last Updated : 12 ಏಪ್ರಿಲ್ 2025, 6:28 IST
ಫಾಲೋ ಮಾಡಿ
Comments
ರಾಮಗಢಕ್ಕೆ ಸವಲತ್ತುಗಳ ಪ್ರಸ್ತಾಪ ಇಲ್ಲ
ಗಣಿಪೀಡಿತ ರಾಮಗಢ ಸ್ಥಳಾಂತರದ ಕುರಿತು ಈಚೆಗೆ ಭಾರಿ ಚರ್ಚೆಗಳಾಗಿದ್ದವು. ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದಿರುವುದು, ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿರುವುದರ ಬಗ್ಗೆ ಮಾಧ್ಯಮಗಳೂ ಗಮನ ಸೆಳೆದಿದ್ದವು. ಆದರೆ, ಈ ಗ್ರಾಮಕ್ಕೆ ಯಾವುದೇ ಸವಲತ್ತು ನೀಡಲು ಕೆಎಂಇಆರ್‌ಸಿ ವಿಫಲವಾಗಿದೆ.  ಇದರ ಜತೆಗೆ ಗಣಿಯಿಂದ ತೀವ್ರವಾಗಿ ಬಾಧಿತವಾಗಿರುವ ಕಮ್ಮತ್ತೂರಿನಂಥ ಗ್ರಾಮಕ್ಕೂ ಯಾವುದೇ ಯೋಜನೆಗಳನ್ನು ಕೆಎಂಇಆರ್‌ಸಿ ಪ್ರಸ್ತಾಪಿಸಿಲ್ಲ. 
ಆಕ್ಷೇಪಿಸಿದ್ದ ಹಿರೇಮಠ
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಹಣವನ್ನು ಕಮ್ಮತ್ತೂರು, ರಾಮಗಢದಂಥ ಗಣಿ ಬಾಧಿತ ಪ್ರದೇಶಗಳಿಗಿಂತಲೂ ಹೆಚ್ಚಾಗಿ ನಗರ ಪ್ರದೇಶಗಳಿಗೇ ಹೆಚ್ಚಾಗಿ ಹಂಚಿಕೆ ಮಾಡಲಾಗುತ್ತಿದೆ. ಈ ಮೂಲಕ ಗಣಿ ಪೀಡಿತ ಪ್ರದೇಶಗಳಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT