<p><strong>ಬಳ್ಳಾರಿ:</strong> ‘ಕುಡುತಿನಿಯಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ವಶಪಡಿಸಿಕೊಳ್ಳುವಾಗ ಆಗಿರುವ ತಪ್ಪು ಬಿಜೆಪಿ ಕಾಲದ್ದು. ಅಂದು ಬಳ್ಳಾರಿ ರಿಪಬ್ಲಿಕ್ ವ್ಯವಸ್ಥೆ ಇತ್ತು. ಅದನ್ನು ಸರಿಪಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ’ ಎಂದು ಸಂಸದ ಇ. ತುಕಾರಾಂ ಹೇಳಿದರು. </p>.<p>ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿತ್ತು. ಕೈಗಾರಿಕೆ ಹಾಕುವವರಿಗೆ ಭೂಮಿ ಕೊಟ್ಟು ಒಪ್ಪಂದ ಮಾಡಿಕೊಳ್ಳಿ ಎಂದು ನಾನು ರೈತರಿಗೆ ಅಂದೇ ಹೇಳಿದ್ದೆ’ ಎಂದರು. </p>.<p>‘ಕಬ್ಬಿಣದ ಕಾರ್ಖಾನೆ ಆರಂಭಿಸಲು ಎನ್ಎಂಡಿಸಿಯು ಜಾಗ ಪಡೆದುಕೊಂಡಿದೆ. ಕಾರ್ಖಾನೆ ಆರಂಭಿಸುವಂತೆ ಕೇಂದ್ರ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೂ ಕಳೆದ ವಾರ ಚರ್ಚಿಸಲಾಗಿದೆ. ಪಿಪಿಪಿ ವ್ಯವಸ್ಥೆಯಲ್ಲಿ ಕುಡುತಿನಿಯಲ್ಲಿ ಕಾರ್ಖಾನೆ ಆರಂಭಿಸಲು ಮನವಿ ಮಾಡಿದ್ದೇನೆ’ ಎಂದರು. </p>.<p>‘ಮಿತ್ತಲ್ ಕಂಪನಿ ವಿಶಾಖ ಪಟ್ಟಣಂನಲ್ಲಿ ಕಾರ್ಖಾನೆ ಆರಂಭಿಸಿರುವುದರಿಂದ ಬಳ್ಳಾರಿಯಲ್ಲಿ ಘಟಕ ಹಾಕುವುದಿಲ್ಲ ಎಂದು ಹೇಳಿದೆ. ಅಲ್ಲಿಗೆ ಯಾರು ಬರಲಿದ್ದಾರೆ ಎಂಬುದನ್ನು ನೋಡಬೇಕಾಗಿದೆ. ಇದನ್ನೇ ಭೂಸಂತ್ರಸ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಭೂಸಂತ್ರಸ್ತರು ಉದ್ಯೋಗವನ್ನೂ ಕೇಳಿದ್ದಾರೆ. ₹5000 ಕೋಟಿ ಬಂಡವಾಳದ 1500 ಜನರಿಗೆ ಉದ್ಯೋಗ ಕಲ್ಪಿಸುವ ಕಾರ್ಖಾನೆಯೊಂದು ಈಗ ಬಂದಿದೆ. ಇದನ್ನೇ ರೈತರಿಗೆ ಹೇಳಿದ್ದೇನೆ. ಪರಿಹಾರವನ್ನು ಕಂಪನಿಯೊಂದಿಗೆ ಚರ್ಚಿಸಿ ಪಡೆಯುವಂತೆ ತಿಳಿಸಿದ್ದೇನೆ’ ಎಂದರು. </p>.<p>‘ಜನಾರ್ದನ ರೆಡ್ಡಿ ಅವರ ಬ್ರಹ್ಮಿಣಿ ಕಂಪನಿ ಎಕರೆಗೆ ₹5 ಲಕ್ಷದಂತೆ ರೈತರಿಂದ ಭೂಮಿ ಖರೀದಿಸಿತು. ಕಂಪನಿಯನ್ನು ಬೇರೊಂದು ಕಂಪನಿಯಲ್ಲಿ ವಿಲೀನಗೊಳಿಸಿ ಭೂಮಿಯನ್ನೂ ಹಸ್ತಾಂತರ ಮಾಡಲಾಗಿದೆ. ಇಲ್ಲಿ ರಿಯಲ್ ಎಸ್ಟೇಟ್ ನಡೆದಿದೆ. ಉತ್ತಮ್ ಗಾಲ್ವಾ ಕಂಪನಿಯನ್ನು ಜನಾರ್ದನ ರೆಡ್ಡಿ ಕರೆತರಬೇಕು. ರೈತರಿಗೆ ಉತ್ತರ ಕೊಡಬೇಕು’ ಎಂದು ಅವರು ಆಗ್ರಹಿಸಿದರು. </p>.<p>‘ಕೆಐಒಸಿಎಲ್ನ ದೇವದಾರಿ ಗಣಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಅದರ ಬಗ್ಗೆ ನಾನು ಈ ಹಂತದಲ್ಲಿ ಏನೂ ಮಾತನಾಡುವುದಿಲ್ಲ’ ಎಂದರು. </p>.<h2>ತುಕಾರಾಂ ಮಾತಿನ ಚಕಮಕಿ </h2>.<p>ಅರ್ಸೆಲರ್ ಮಿತ್ತಲ್ನ ಕೈಗಾರಿಕೆಗಾಗಿ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಜೆಎಸ್ಡಬ್ಲ್ಯುಗೆ ನೀಡಿರುವುದನ್ನು ವಿರೋಧಿಸಿ, ಭೂಮಿ ಹಿಂದಿರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿರುವ ಕುಡುತಿನಿ ಭೂ ಸಂತ್ರಸ್ತ ರೈತರನ್ನು ಸಂಸದ ಇ.ತುಕಾರಾಂ ಮಂಗಳವಾರ ಸಂಜೆ ಭೇಟಿಯಾದರು. </p>.<p>ಈ ವೇಳೆ ಹೋರಾಟಗಾರರೊಂದಿಗೆ ತುಕಾರಾಂ ವಾಗ್ವಾದಕ್ಕೆ ಇಳಿದರು. ‘ಈ ಸಮಸ್ಯೆ ಸೃಷ್ಟಿಮಾಡಿದ್ದು ಜನಾರ್ದನ ರೆಡ್ಡಿ, ಹೋಗಿ ಅವರ ಬಳಿ ಇದನ್ನು ಹೇಳು’ ಎಂದು ರೈತರೊಬ್ಬರನ್ನು ಗದರಿದರು. ಇದಕ್ಕೆ ಆಕ್ರೋಶಗೊಂಡ ಹೋರಾಟಗಾರರು ತುಕಾರಾಂ ವಿರುದ್ಧ ತಿರುಗಿಬಿದ್ದ ಘಟನೆ ನಡೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ‘ಕುಡುತಿನಿಯಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ವಶಪಡಿಸಿಕೊಳ್ಳುವಾಗ ಆಗಿರುವ ತಪ್ಪು ಬಿಜೆಪಿ ಕಾಲದ್ದು. ಅಂದು ಬಳ್ಳಾರಿ ರಿಪಬ್ಲಿಕ್ ವ್ಯವಸ್ಥೆ ಇತ್ತು. ಅದನ್ನು ಸರಿಪಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ’ ಎಂದು ಸಂಸದ ಇ. ತುಕಾರಾಂ ಹೇಳಿದರು. </p>.<p>ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿತ್ತು. ಕೈಗಾರಿಕೆ ಹಾಕುವವರಿಗೆ ಭೂಮಿ ಕೊಟ್ಟು ಒಪ್ಪಂದ ಮಾಡಿಕೊಳ್ಳಿ ಎಂದು ನಾನು ರೈತರಿಗೆ ಅಂದೇ ಹೇಳಿದ್ದೆ’ ಎಂದರು. </p>.<p>‘ಕಬ್ಬಿಣದ ಕಾರ್ಖಾನೆ ಆರಂಭಿಸಲು ಎನ್ಎಂಡಿಸಿಯು ಜಾಗ ಪಡೆದುಕೊಂಡಿದೆ. ಕಾರ್ಖಾನೆ ಆರಂಭಿಸುವಂತೆ ಕೇಂದ್ರ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೂ ಕಳೆದ ವಾರ ಚರ್ಚಿಸಲಾಗಿದೆ. ಪಿಪಿಪಿ ವ್ಯವಸ್ಥೆಯಲ್ಲಿ ಕುಡುತಿನಿಯಲ್ಲಿ ಕಾರ್ಖಾನೆ ಆರಂಭಿಸಲು ಮನವಿ ಮಾಡಿದ್ದೇನೆ’ ಎಂದರು. </p>.<p>‘ಮಿತ್ತಲ್ ಕಂಪನಿ ವಿಶಾಖ ಪಟ್ಟಣಂನಲ್ಲಿ ಕಾರ್ಖಾನೆ ಆರಂಭಿಸಿರುವುದರಿಂದ ಬಳ್ಳಾರಿಯಲ್ಲಿ ಘಟಕ ಹಾಕುವುದಿಲ್ಲ ಎಂದು ಹೇಳಿದೆ. ಅಲ್ಲಿಗೆ ಯಾರು ಬರಲಿದ್ದಾರೆ ಎಂಬುದನ್ನು ನೋಡಬೇಕಾಗಿದೆ. ಇದನ್ನೇ ಭೂಸಂತ್ರಸ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಭೂಸಂತ್ರಸ್ತರು ಉದ್ಯೋಗವನ್ನೂ ಕೇಳಿದ್ದಾರೆ. ₹5000 ಕೋಟಿ ಬಂಡವಾಳದ 1500 ಜನರಿಗೆ ಉದ್ಯೋಗ ಕಲ್ಪಿಸುವ ಕಾರ್ಖಾನೆಯೊಂದು ಈಗ ಬಂದಿದೆ. ಇದನ್ನೇ ರೈತರಿಗೆ ಹೇಳಿದ್ದೇನೆ. ಪರಿಹಾರವನ್ನು ಕಂಪನಿಯೊಂದಿಗೆ ಚರ್ಚಿಸಿ ಪಡೆಯುವಂತೆ ತಿಳಿಸಿದ್ದೇನೆ’ ಎಂದರು. </p>.<p>‘ಜನಾರ್ದನ ರೆಡ್ಡಿ ಅವರ ಬ್ರಹ್ಮಿಣಿ ಕಂಪನಿ ಎಕರೆಗೆ ₹5 ಲಕ್ಷದಂತೆ ರೈತರಿಂದ ಭೂಮಿ ಖರೀದಿಸಿತು. ಕಂಪನಿಯನ್ನು ಬೇರೊಂದು ಕಂಪನಿಯಲ್ಲಿ ವಿಲೀನಗೊಳಿಸಿ ಭೂಮಿಯನ್ನೂ ಹಸ್ತಾಂತರ ಮಾಡಲಾಗಿದೆ. ಇಲ್ಲಿ ರಿಯಲ್ ಎಸ್ಟೇಟ್ ನಡೆದಿದೆ. ಉತ್ತಮ್ ಗಾಲ್ವಾ ಕಂಪನಿಯನ್ನು ಜನಾರ್ದನ ರೆಡ್ಡಿ ಕರೆತರಬೇಕು. ರೈತರಿಗೆ ಉತ್ತರ ಕೊಡಬೇಕು’ ಎಂದು ಅವರು ಆಗ್ರಹಿಸಿದರು. </p>.<p>‘ಕೆಐಒಸಿಎಲ್ನ ದೇವದಾರಿ ಗಣಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಅದರ ಬಗ್ಗೆ ನಾನು ಈ ಹಂತದಲ್ಲಿ ಏನೂ ಮಾತನಾಡುವುದಿಲ್ಲ’ ಎಂದರು. </p>.<h2>ತುಕಾರಾಂ ಮಾತಿನ ಚಕಮಕಿ </h2>.<p>ಅರ್ಸೆಲರ್ ಮಿತ್ತಲ್ನ ಕೈಗಾರಿಕೆಗಾಗಿ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಜೆಎಸ್ಡಬ್ಲ್ಯುಗೆ ನೀಡಿರುವುದನ್ನು ವಿರೋಧಿಸಿ, ಭೂಮಿ ಹಿಂದಿರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿರುವ ಕುಡುತಿನಿ ಭೂ ಸಂತ್ರಸ್ತ ರೈತರನ್ನು ಸಂಸದ ಇ.ತುಕಾರಾಂ ಮಂಗಳವಾರ ಸಂಜೆ ಭೇಟಿಯಾದರು. </p>.<p>ಈ ವೇಳೆ ಹೋರಾಟಗಾರರೊಂದಿಗೆ ತುಕಾರಾಂ ವಾಗ್ವಾದಕ್ಕೆ ಇಳಿದರು. ‘ಈ ಸಮಸ್ಯೆ ಸೃಷ್ಟಿಮಾಡಿದ್ದು ಜನಾರ್ದನ ರೆಡ್ಡಿ, ಹೋಗಿ ಅವರ ಬಳಿ ಇದನ್ನು ಹೇಳು’ ಎಂದು ರೈತರೊಬ್ಬರನ್ನು ಗದರಿದರು. ಇದಕ್ಕೆ ಆಕ್ರೋಶಗೊಂಡ ಹೋರಾಟಗಾರರು ತುಕಾರಾಂ ವಿರುದ್ಧ ತಿರುಗಿಬಿದ್ದ ಘಟನೆ ನಡೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>