ತಾಲ್ಲೂಕಿನ ತೊಗರಿಕಟ್ಟೆ, ಗೋವೆರಹಳ್ಳಿ, ಅಲರಮರಸಿಕೆರೆ, ಯಡಿಹಳ್ಳಿ, ಬಿಕ್ಕಿಕಟ್ಟಿ, ಕುಂಚೂರು, ಅರಸನಾಳು, ಕುಂಚೂರು, ನಿಟ್ಟೂರು, ತಾವರಗುಂದಿಯ ನೂರಾರು ಕಾರ್ಮಿಕರು 500ಕ್ಕೂ ಅಧಿಕ ಅಂಚೆಪತ್ರಗಳನ್ನು ಅಂಚೆಪೆಟ್ಟಿಗೆಗೆ ಹಾಕುವ ಮೂಲಕ ಬರಗಾಲ ಇರುವ ಕಾರಣ ಉದ್ಯೋಗ ಖಾತ್ರಿಯಲ್ಲಿ ಹೆಚ್ಚುವರಿ 50 ಮಾನವ ದಿನಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.