ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ: ಗಡಿ ಗುರುತಿಲ್ಲದೇ ಗಣಿ ಸರ್ವೆ ಆರಂಭ!

Published : 27 ಮೇ 2024, 1:23 IST
Last Updated : 27 ಮೇ 2024, 1:23 IST
ಫಾಲೋ ಮಾಡಿ
Comments
ಅಂತರರಾಜ್ಯ ಗಡಿ ಗುರುತಿಸುವ ಕಾರ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಇಲ್ಲ. ಆದರೆ, ಸದ್ಯ ಬಿ–1 ವರ್ಗದ ಏಳು ಗಣಿಗಳ ಜಂಟಿ ಸರ್ವೆ ಕಾರ್ಯ ನಡೆಸಲು ಸಿಇಸಿ ತೀರ್ಮಾನಿಸಿದೆ. ಅದರಂತೆ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ.
ಚಂದ್ರಶೇಖರ್‌ ಹಿರೇಮಠ, ಹಿರಿಯ ಭೂವಿಜ್ಞಾನಿ, ಬಳ್ಳಾರಿ
ಗಣಿ ಸಮೀಕ್ಷೆ ಏಕೆ?
‘ಸಮಾಜ ಪರಿವರ್ತನ ಸಮುದಾಯ’ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ತುಮಕೂರು, ಚಿತ್ರದುರ್ಗ, ಬಳ್ಳಾರಿಯ ಬಹುತೇಕ ಗಣಿ ಗುತ್ತಿಗೆಗಳ ವರ್ಗೀಕರಣವನ್ನು 2012-13ರಲ್ಲೇ ಮಾಡಲಾಗಿತ್ತು. ಗಣಿಗಾರಿಕೆಯಲ್ಲಿ ಹೆಚ್ಚಿನ ಅಕ್ರಮವಾಗಿದ್ದರೆ, ಅವುಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗುತ್ತದೆ. ಅಲ್ಪ ಪ್ರಮಾಣದ ಅಕ್ರಮಗಳು ನಡೆದಿದ್ದರೆ ಅವುಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗುತ್ತದೆ. ಅಕ್ರಮ ಇಲ್ಲದಿದ್ದರೆ ಅದನ್ನು ‘ಎ’ ವರ್ಗಕ್ಕೆ ಸೇರಿಸಲಾಗುತ್ತದೆ. ಸದ್ಯ ಈ ಏಳೂ ಗಣಿಗಳು ಅಂತರರಾಜ್ಯ ಗಡಿಯಲ್ಲಿ ಬರುತ್ತಿರುವ ಕಾರಣ ಇವುಗಳನ್ನು ‘ಬಿ–1’ ವರ್ಗದಲ್ಲಿ ಅಂತಿಮವಲ್ಲದ ಗಣಿ ಗುತ್ತಿಗೆಗಳು ಎಂದು ಪರಿಗಣಿಸಲಾಗಿದೆ. ಮೊದಲು ಗಡಿ ಅಂತಿಮಗೊಂಡರೆ ಮಾತ್ರ ಗಣಿ ಸಮೀಕ್ಷೆ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT