ಗಣಿ ಸಮೀಕ್ಷೆ ಏಕೆ?
‘ಸಮಾಜ ಪರಿವರ್ತನ ಸಮುದಾಯ’ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ತುಮಕೂರು, ಚಿತ್ರದುರ್ಗ, ಬಳ್ಳಾರಿಯ ಬಹುತೇಕ ಗಣಿ ಗುತ್ತಿಗೆಗಳ ವರ್ಗೀಕರಣವನ್ನು 2012-13ರಲ್ಲೇ ಮಾಡಲಾಗಿತ್ತು. ಗಣಿಗಾರಿಕೆಯಲ್ಲಿ ಹೆಚ್ಚಿನ ಅಕ್ರಮವಾಗಿದ್ದರೆ, ಅವುಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗುತ್ತದೆ. ಅಲ್ಪ ಪ್ರಮಾಣದ ಅಕ್ರಮಗಳು ನಡೆದಿದ್ದರೆ ಅವುಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗುತ್ತದೆ. ಅಕ್ರಮ ಇಲ್ಲದಿದ್ದರೆ ಅದನ್ನು ‘ಎ’ ವರ್ಗಕ್ಕೆ ಸೇರಿಸಲಾಗುತ್ತದೆ. ಸದ್ಯ ಈ ಏಳೂ ಗಣಿಗಳು ಅಂತರರಾಜ್ಯ ಗಡಿಯಲ್ಲಿ ಬರುತ್ತಿರುವ ಕಾರಣ ಇವುಗಳನ್ನು ‘ಬಿ–1’ ವರ್ಗದಲ್ಲಿ ಅಂತಿಮವಲ್ಲದ ಗಣಿ ಗುತ್ತಿಗೆಗಳು ಎಂದು ಪರಿಗಣಿಸಲಾಗಿದೆ. ಮೊದಲು ಗಡಿ ಅಂತಿಮಗೊಂಡರೆ ಮಾತ್ರ ಗಣಿ ಸಮೀಕ್ಷೆ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.