<p><strong>ಹರಪನಹಳ್ಳಿ</strong>: ತಾಲ್ಲೂಕಿನ ಚಿಗಟೇರಿ ಗ್ರಾಮದ ನಾರದಮುನಿ ಸಮುದಾಯ ಭವನದಲ್ಲಿ ಭಾನುವಾರ ನಮ್ಮನಡೆ ಆರೋಗ್ಯದೆಡೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.</p>.<p>ದಾವಣಗೆರೆ ಎಸ್.ಎಸ್.ಕೇರ್ ಟ್ರಸ್ಟ್, ಜೆ.ಜೆ.ಎಂ.ಮಹಾವಿದ್ಯಾಲಯ, ಬಾಪೂಜಿ ಆಸ್ಪತ್ರೆ ಸಹಯೋಗದಲ್ಲಿ ಜರುಗಿದ ಆರೋಗ್ಯ ಮೇಳವನ್ನು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿದರು.</p>.<p>ಪ್ರತಿದಿನ ಕನಿಷ್ಠ 30 ನಿಮಿಷ ನಡೆದರೂ ಸಾಕು. ಯೋಗ ಮತ್ತು ಪ್ರಾಣಾಯಾಮ ದೇಹ-ಮನಸ್ಸಿಗೆ ಶಾಂತಿ ಮತ್ತು ಶಕ್ತಿ ನೀಡುತ್ತವೆ. ಪ್ರತಿದಿನ 7-8 ಗಂಟೆಗಳ ನಿದ್ರೆ ದೇಹಕ್ಕೆ ಹೊಸ ಶಕ್ತಿ ನೀಡುತ್ತದೆ. ಮೊಬೈಲ್ ಮತ್ತು ಟಿವಿ ಸಮಯವನ್ನು ನಿದ್ರೆಗೆ ಅಡ್ಡಿಯಾಗದಂತೆ ನಿಯಂತ್ರಿಸಬೇಕು ಎಂದರು.</p>.<p>ಧ್ಯಾನ, ಓದು, ಸಂಗೀತ, ಪ್ರಾರ್ಥನೆ ಇವುಗಳು ಮನಸ್ಸಿಗೆ ಶಾಂತಿ ತರುತ್ತವೆ. ಒತ್ತಡ ನಿಯಂತ್ರಿಸಲು ಸಕಾರಾತ್ಮಕ ಚಿಂತನೆ ಬೆಳೆಸಬೇಕು. ಸಾಕಷ್ಟು ನೀರು ಕುಡಿಯಬೇಕು. ವೈಯಕ್ತಿಕ ಮತ್ತು ಪರಿಸರದ ಸ್ವಚ್ಛತೆ ಆರೋಗ್ಯದ ಮೂಲ ಎಂದು ಸಲಹೆ ನೀಡಿದರು.</p>.<p>ಚಿಗಟೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಹಾಲಮ್ಮ, ಡಾ.ಮೂಗನಗೌಡ್ರು, ಡಾ.ವಿನಯ್ ಬೇಂದ್ರೆ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ, ಹರಪನಹಳ್ಳಿ ಬ್ಲಾಕ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ , ಒ.ರಾಮಪ್ಪ, ಟಿ.ವೆಂಕಟೇಶ್, ಎಚ್.ವಸಂತಪ್ಪ, ಟಿ.ವೆಂಕಟೇಶ, ಮುತ್ತಿಗಿ ಜಂಬಣ್ಣ, ಮಂಜುನಾಥ, ಮಲ್ಲಿಕಾರ್ಜುನ ಗೌಡ, ದೇವೇಂದ್ರ ಗೌಡ, ಐ.ಸಲಾಂ ಸಾಬ್ ಇದ್ದರು.</p>.<p>ಇದಕ್ಕೂ ಮುನ್ನ ಅರಸೀಕೆರೆ ಗ್ರಾಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿ ಮಾತನಾಡಿ, ಬಸ್ ನಿಲ್ದಾಣ ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಅಕ್ಕಪಕ್ಕದ ಶೆಡ್ ತೆರವುಗೊಳಿಸಲು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ</strong>: ತಾಲ್ಲೂಕಿನ ಚಿಗಟೇರಿ ಗ್ರಾಮದ ನಾರದಮುನಿ ಸಮುದಾಯ ಭವನದಲ್ಲಿ ಭಾನುವಾರ ನಮ್ಮನಡೆ ಆರೋಗ್ಯದೆಡೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.</p>.<p>ದಾವಣಗೆರೆ ಎಸ್.ಎಸ್.ಕೇರ್ ಟ್ರಸ್ಟ್, ಜೆ.ಜೆ.ಎಂ.ಮಹಾವಿದ್ಯಾಲಯ, ಬಾಪೂಜಿ ಆಸ್ಪತ್ರೆ ಸಹಯೋಗದಲ್ಲಿ ಜರುಗಿದ ಆರೋಗ್ಯ ಮೇಳವನ್ನು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿದರು.</p>.<p>ಪ್ರತಿದಿನ ಕನಿಷ್ಠ 30 ನಿಮಿಷ ನಡೆದರೂ ಸಾಕು. ಯೋಗ ಮತ್ತು ಪ್ರಾಣಾಯಾಮ ದೇಹ-ಮನಸ್ಸಿಗೆ ಶಾಂತಿ ಮತ್ತು ಶಕ್ತಿ ನೀಡುತ್ತವೆ. ಪ್ರತಿದಿನ 7-8 ಗಂಟೆಗಳ ನಿದ್ರೆ ದೇಹಕ್ಕೆ ಹೊಸ ಶಕ್ತಿ ನೀಡುತ್ತದೆ. ಮೊಬೈಲ್ ಮತ್ತು ಟಿವಿ ಸಮಯವನ್ನು ನಿದ್ರೆಗೆ ಅಡ್ಡಿಯಾಗದಂತೆ ನಿಯಂತ್ರಿಸಬೇಕು ಎಂದರು.</p>.<p>ಧ್ಯಾನ, ಓದು, ಸಂಗೀತ, ಪ್ರಾರ್ಥನೆ ಇವುಗಳು ಮನಸ್ಸಿಗೆ ಶಾಂತಿ ತರುತ್ತವೆ. ಒತ್ತಡ ನಿಯಂತ್ರಿಸಲು ಸಕಾರಾತ್ಮಕ ಚಿಂತನೆ ಬೆಳೆಸಬೇಕು. ಸಾಕಷ್ಟು ನೀರು ಕುಡಿಯಬೇಕು. ವೈಯಕ್ತಿಕ ಮತ್ತು ಪರಿಸರದ ಸ್ವಚ್ಛತೆ ಆರೋಗ್ಯದ ಮೂಲ ಎಂದು ಸಲಹೆ ನೀಡಿದರು.</p>.<p>ಚಿಗಟೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಹಾಲಮ್ಮ, ಡಾ.ಮೂಗನಗೌಡ್ರು, ಡಾ.ವಿನಯ್ ಬೇಂದ್ರೆ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ, ಹರಪನಹಳ್ಳಿ ಬ್ಲಾಕ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ , ಒ.ರಾಮಪ್ಪ, ಟಿ.ವೆಂಕಟೇಶ್, ಎಚ್.ವಸಂತಪ್ಪ, ಟಿ.ವೆಂಕಟೇಶ, ಮುತ್ತಿಗಿ ಜಂಬಣ್ಣ, ಮಂಜುನಾಥ, ಮಲ್ಲಿಕಾರ್ಜುನ ಗೌಡ, ದೇವೇಂದ್ರ ಗೌಡ, ಐ.ಸಲಾಂ ಸಾಬ್ ಇದ್ದರು.</p>.<p>ಇದಕ್ಕೂ ಮುನ್ನ ಅರಸೀಕೆರೆ ಗ್ರಾಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿ ಮಾತನಾಡಿ, ಬಸ್ ನಿಲ್ದಾಣ ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಅಕ್ಕಪಕ್ಕದ ಶೆಡ್ ತೆರವುಗೊಳಿಸಲು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>