<p>ಹರಪನಹಳ್ಳಿ (ವಿಜಯನಗರ ಜಿಲ್ಲೆ): ಅಪಘಾತಗಳಲ್ಲಿ ಕೈ ಕಾಲು ಮುರಿದುಕೊಂಡು ಬಂದ ಸಾವಿರಾರು ಜನರಿಗೆ ನಾಟಿ ವೈದ್ಯ ಪದ್ಧತಿ ಮೂಲಕ ಉಪಚರಿಸುತ್ತಿದ್ದಾರೆ ಬಾಗಳಿ ಹೊಸೂರಪ್ಪ. ಸ್ವತಃ ದೈಹಿಕವಾಗಿ ಅಂಗವೈಕಲ್ಯ ಹೊಂದಿದ್ದರೂ ಇತರರು ಅಂಗವಿಕಲರಾಗದಂತೆ ಕಾಳಜಿ ವಹಿಸುವುದು ಅವರ ವ್ಯಕ್ತಿತ್ವದ ಗುಣ.</p>.<p>ವಂಶ ಪಾರಂಪರ್ಯ ನಾಟಿ ವೈದ್ಯ ಪದ್ಧತಿ ಮಾಡಿಕೊಂಡಿದ್ದ ಬಾಗಳಿ ಕೆಂಚಪ್ಪ ಮತ್ತು ಶಂಕರಮ್ಮ ದಂಪತಿಯ ಪುತ್ರರಲ್ಲಿ ಇವರೂ ಒಬ್ಬರು. ಈ ದಂಪತಿ ತಮ್ಮ ಮಕ್ಕಳಿಗೂ ಔಷಧೋಪಚಾರ ಕಲಿಸಿದ್ದಾರೆ.ಕೆಂಚಪ್ಪ ಅವರ ನಿಧನ ಬಳಿಕ ಬಾಗಳಿ ಹೊಸೂರಪ್ಪ ಅವರು, ತಮ್ಮ ಸಹೋದರರಾದ ನಾಗರಾಜ, ಪರಶುರಾಮ ಅವರ ಸಹಕಾರದಿಂದ ತಮ್ಮ ಮನೆತನದ ನಾಲ್ಕು ತಲೆಮಾರಿನ ವೃತ್ತಿಯನ್ನು ಮುಂದುವರಿಸಿದ್ದಾರೆ.</p>.<p>ಕೀಲುಜೋಡಿ ಆಯತಪ್ಪಿದ್ದರೆ, ಸ್ಥಳದಲ್ಲೇ ಜೋಡಿಸಿ, ಜಂಟಿಯಾದ ನರಗಳನ್ನು ಸರಿಪಡಿಸುತ್ತಾರೆ. ಬೆನ್ನು ನೋವು, ಕಾಲು, ಮೊಣಕಾಲು ಮೂಳೆ ನೋವಿಗೆ ಇವರ ಚಿಕಿತ್ಸೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಅಪಘಾತಗಳಲ್ಲಿ ಸಮಸ್ಯೆಗೆ ಒಳಗಾದವರು ಇವರ ಬಳಿ ಬಂದು ಚಿಕಿತ್ಸೆ ಪಡೆಯುವುದು ನಿರಂತರ ನಡೆದಿದೆ.</p>.<p>ಕಾಡು–ಮೇಡುಗಳಲ್ಲಿ ಅಲೆದಾಡಿ ಔಷಧಿ ಗಿಡಗಳ ಸೊಪ್ಪು ತಂದು ಅರೆದು ಔಷಧಿ ತಯಾರಿಸುತ್ತಾರೆ. ಇವರು ಸಿದ್ಧಪಡಿಸಿದ ಔಷಧಿಯನ್ನು ಹಾಲಿನಲ್ಲಿ ಬೆರೆಸಿ ತೆಗೆದುಕೊಂಡರೆ ಮುರಿದ ಕೈಕಾಲುಗಳು ಸರಿಯಾಗುತ್ತವೆ. ನರಗಳು ಒಂದಕ್ಕೊಂದು ತಳುಕು ಹಾಕಿಕೊಂಡು ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲೂ ಇವರು ಸಿದ್ಧ ಹಸ್ತರು.</p>.<p>ಕೇವಲ ನೂರು, ಎರಡು ನೂರು ರೂಪಾಯಿ ಪಡೆದು ಸೇವೆ<br />ಸಲ್ಲಿಸುತ್ತಿರುವ ಈ ಕುಟುಂಬದ ಸದಸ್ಯರು, ಬರುವ ಅಲ್ಪ ಆದಾಯದಲ್ಲಿ ಸಮುದಾಯ ಭವನ ಕಟ್ಟಿಸಿ ಸಾರ್ಥಕ ಸೇವೆ ಮಾಡುತ್ತಿದ್ದಾರೆ.</p>.<p>ತಮ್ಮ ತರ್ಕಕ್ಕೆ ನಿಲುಕದನೋವುಗಳಿಗೆ ಚಿಕಿತ್ಸೆ ಕೊಡುವ ಅಥವಾ ಸುಳ್ಳು ಭರವಸೆ ನೀಡುವ ಚಾಳಿ ಅವರದ್ದಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಪನಹಳ್ಳಿ (ವಿಜಯನಗರ ಜಿಲ್ಲೆ): ಅಪಘಾತಗಳಲ್ಲಿ ಕೈ ಕಾಲು ಮುರಿದುಕೊಂಡು ಬಂದ ಸಾವಿರಾರು ಜನರಿಗೆ ನಾಟಿ ವೈದ್ಯ ಪದ್ಧತಿ ಮೂಲಕ ಉಪಚರಿಸುತ್ತಿದ್ದಾರೆ ಬಾಗಳಿ ಹೊಸೂರಪ್ಪ. ಸ್ವತಃ ದೈಹಿಕವಾಗಿ ಅಂಗವೈಕಲ್ಯ ಹೊಂದಿದ್ದರೂ ಇತರರು ಅಂಗವಿಕಲರಾಗದಂತೆ ಕಾಳಜಿ ವಹಿಸುವುದು ಅವರ ವ್ಯಕ್ತಿತ್ವದ ಗುಣ.</p>.<p>ವಂಶ ಪಾರಂಪರ್ಯ ನಾಟಿ ವೈದ್ಯ ಪದ್ಧತಿ ಮಾಡಿಕೊಂಡಿದ್ದ ಬಾಗಳಿ ಕೆಂಚಪ್ಪ ಮತ್ತು ಶಂಕರಮ್ಮ ದಂಪತಿಯ ಪುತ್ರರಲ್ಲಿ ಇವರೂ ಒಬ್ಬರು. ಈ ದಂಪತಿ ತಮ್ಮ ಮಕ್ಕಳಿಗೂ ಔಷಧೋಪಚಾರ ಕಲಿಸಿದ್ದಾರೆ.ಕೆಂಚಪ್ಪ ಅವರ ನಿಧನ ಬಳಿಕ ಬಾಗಳಿ ಹೊಸೂರಪ್ಪ ಅವರು, ತಮ್ಮ ಸಹೋದರರಾದ ನಾಗರಾಜ, ಪರಶುರಾಮ ಅವರ ಸಹಕಾರದಿಂದ ತಮ್ಮ ಮನೆತನದ ನಾಲ್ಕು ತಲೆಮಾರಿನ ವೃತ್ತಿಯನ್ನು ಮುಂದುವರಿಸಿದ್ದಾರೆ.</p>.<p>ಕೀಲುಜೋಡಿ ಆಯತಪ್ಪಿದ್ದರೆ, ಸ್ಥಳದಲ್ಲೇ ಜೋಡಿಸಿ, ಜಂಟಿಯಾದ ನರಗಳನ್ನು ಸರಿಪಡಿಸುತ್ತಾರೆ. ಬೆನ್ನು ನೋವು, ಕಾಲು, ಮೊಣಕಾಲು ಮೂಳೆ ನೋವಿಗೆ ಇವರ ಚಿಕಿತ್ಸೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಅಪಘಾತಗಳಲ್ಲಿ ಸಮಸ್ಯೆಗೆ ಒಳಗಾದವರು ಇವರ ಬಳಿ ಬಂದು ಚಿಕಿತ್ಸೆ ಪಡೆಯುವುದು ನಿರಂತರ ನಡೆದಿದೆ.</p>.<p>ಕಾಡು–ಮೇಡುಗಳಲ್ಲಿ ಅಲೆದಾಡಿ ಔಷಧಿ ಗಿಡಗಳ ಸೊಪ್ಪು ತಂದು ಅರೆದು ಔಷಧಿ ತಯಾರಿಸುತ್ತಾರೆ. ಇವರು ಸಿದ್ಧಪಡಿಸಿದ ಔಷಧಿಯನ್ನು ಹಾಲಿನಲ್ಲಿ ಬೆರೆಸಿ ತೆಗೆದುಕೊಂಡರೆ ಮುರಿದ ಕೈಕಾಲುಗಳು ಸರಿಯಾಗುತ್ತವೆ. ನರಗಳು ಒಂದಕ್ಕೊಂದು ತಳುಕು ಹಾಕಿಕೊಂಡು ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲೂ ಇವರು ಸಿದ್ಧ ಹಸ್ತರು.</p>.<p>ಕೇವಲ ನೂರು, ಎರಡು ನೂರು ರೂಪಾಯಿ ಪಡೆದು ಸೇವೆ<br />ಸಲ್ಲಿಸುತ್ತಿರುವ ಈ ಕುಟುಂಬದ ಸದಸ್ಯರು, ಬರುವ ಅಲ್ಪ ಆದಾಯದಲ್ಲಿ ಸಮುದಾಯ ಭವನ ಕಟ್ಟಿಸಿ ಸಾರ್ಥಕ ಸೇವೆ ಮಾಡುತ್ತಿದ್ದಾರೆ.</p>.<p>ತಮ್ಮ ತರ್ಕಕ್ಕೆ ನಿಲುಕದನೋವುಗಳಿಗೆ ಚಿಕಿತ್ಸೆ ಕೊಡುವ ಅಥವಾ ಸುಳ್ಳು ಭರವಸೆ ನೀಡುವ ಚಾಳಿ ಅವರದ್ದಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>