<p><strong>ಕೊಟ್ಟೂರು:</strong> ‘ಪುರಾಣ ಶ್ರವಣದಿಂದ ಸಂಸ್ಕಾರವಂತರಾಗಲು ಸಾಧ್ಯ’ ಎಂದು ಉಜ್ಜಯಿನಿ ಪೀಠಾಧೀಶ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.</p>.<p>ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಮಹಾಕಾಳಿಕಾಂಬ ದೇವಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ 46ನೇ ವರ್ಷದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಕ್ಕಳನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ, ಸಂಸ್ಕಾರವಂತರನ್ನಾಗಿ ಮಾಡುವ ಹೊಣೆ ಹೆತ್ತವರದ್ದಾಗಿದೆ. ದಯೆ, ದಾನ, ಧರ್ಮ, ಮಾನವೀಯತೆಯಿಂದ ಸಾರ್ಥಕ್ಯ ಗಳಿಸಬಹುದು’ ಎಂದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ಚೌಡಪ್ಪ, ಕುರುಗೋಡು ಸಿದ್ದಣ್ಣ, ಪೊಲೀಸ್ ರೇವಣ್ಣ, ಕೊಟ್ರೇಶ್ ಆಚಾರ್, ವೀರೇಶ್ ಆಚಾರ್, ರವೀಂದ್ರ ಆಚಾರ್, ಸಿದ್ದೇಶ ಶರ್ಮ, ಮರುಳಸಿದ್ಧಚಾರಿ, ಸಿದ್ಧಲಿಂಗಯ್ಯ, ವೆಂಕಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು:</strong> ‘ಪುರಾಣ ಶ್ರವಣದಿಂದ ಸಂಸ್ಕಾರವಂತರಾಗಲು ಸಾಧ್ಯ’ ಎಂದು ಉಜ್ಜಯಿನಿ ಪೀಠಾಧೀಶ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.</p>.<p>ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಮಹಾಕಾಳಿಕಾಂಬ ದೇವಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ 46ನೇ ವರ್ಷದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಕ್ಕಳನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ, ಸಂಸ್ಕಾರವಂತರನ್ನಾಗಿ ಮಾಡುವ ಹೊಣೆ ಹೆತ್ತವರದ್ದಾಗಿದೆ. ದಯೆ, ದಾನ, ಧರ್ಮ, ಮಾನವೀಯತೆಯಿಂದ ಸಾರ್ಥಕ್ಯ ಗಳಿಸಬಹುದು’ ಎಂದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ಚೌಡಪ್ಪ, ಕುರುಗೋಡು ಸಿದ್ದಣ್ಣ, ಪೊಲೀಸ್ ರೇವಣ್ಣ, ಕೊಟ್ರೇಶ್ ಆಚಾರ್, ವೀರೇಶ್ ಆಚಾರ್, ರವೀಂದ್ರ ಆಚಾರ್, ಸಿದ್ದೇಶ ಶರ್ಮ, ಮರುಳಸಿದ್ಧಚಾರಿ, ಸಿದ್ಧಲಿಂಗಯ್ಯ, ವೆಂಕಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>