ವಿಮೆ ಮಾಡಿಸಲು ಕೃಷಿ ಇಲಾಖೆ ಸಲಹೆ
ಕಳೆದ ಸಾಲಿಗಿಂತ ಈ ಬಾರಿ ಉತ್ತಮ ಮಳೆಯಿದ್ದು ರೈತರು ತಮ್ಮ ಫಸಲಿನ ಸುರಕ್ಷತೆಯ ದೃಷ್ಟಿಯಿಂದ ವಿಮೆ ಮಾಡಿಸಬೇಕು ಎಂದು ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸರ್ಕಾರದ ಆದೇಶದಂತೆ ಬಳ್ಳಾರಿ ಜಿಲ್ಲೆಗೆ ಟಾಟಾ ಎಐಜಿ ವಿಮಾ ಕಂಪನಿಯು ಇನ್ಶೂರೆನ್ಸ್ ನ್ನು ಅನುಷ್ಠಾನಗಿಳಿಸುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಕಳೆದ ವರ್ಷ ಸುಮಾರು 81 ರೈತರು ವಿಮೆ ಮಾಡಿಸಿ ₹ 14.83 ಲಕ್ಷ ವಿಮಾ ಮೊತ್ತವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಮೆಕ್ಕೆಜೋಳಜೋಳ ವಿಮೆಗೆ ಜುಲೈ 31 ಹಾಗೂ ಸಜ್ಜೆನವಣೆಶೇಂಗಾ ಹಾಗೂ ಮಳೆಯಾಶ್ರಿತ ಭತ್ತಕ್ಕೆ ಆಗಸ್ಟ್ 16 ಕೊನೆಯದಿನವೆಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.