ಪೊಲೀಸ್ ಕಿರುಕುಳ ಇಲ್ಲ: ಎಸ್ಪಿ ಸ್ಪಷ್ಟನೆ
ನಗರದಲ್ಲಿ ನಡೆಯುತ್ತಿರುವ ಚಿನ್ನ ಬೆಳ್ಳಿ ಆಭರಣ ತಯಾರಿಕರ ಪ್ರತಿಭಟನೆಯ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾರಾಣಿ ವಿ.ಜೆ ‘ಬೇರೆ ಬೇರೆ ಕಡೆಗಳ ಸಮಸ್ಯೆ ಕುರಿತು ಪ್ರತಿಭಟನೆ ನಡೆಯುತ್ತಿದೆ. ಕಳವು ಪ್ರಕರಣಗಳಲ್ಲಿ ಆರೋಪಿಗಳು ಯಾರದ್ದಾದರೂ ಹೆಸರು ಹೇಳಿದ್ದರಷ್ಟೇ ಅವರನ್ನು ವಿಚಾರಿಸುತ್ತೇವೆ. ವಿನಾಕಾರಣ ಎಲ್ಲರನ್ನೂ ವಿಚಾರಣೆಗೆ ಕರೆಯುವುದಿಲ್ಲ. ಸದ್ಯ ಈಗ ನಡೆಯುತ್ತಿರುವ ಪ್ರತಿಭಟನೆ ನಮ್ಮ ಜಿಲ್ಲೆಗೆ ಸಂಬಂಧಿಸಿದ್ದಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ನನಗೆ ತಿಳಿಸಲಿ. ಕಳವಿನ ಮಾಲುಗಳನ್ನು ಖರೀದಿ ಮಾಡಿದ್ದರೆ ಅದನ್ನು ಯಾರೇ ಆಗಲಿ ಹಿಂತಿರುಗಿಸಲೇಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು