ತೋರಣಗಲ್ಲು: ಹೋಬಳಿಯ ಬನ್ನಿಹಟ್ಟಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಜಿಂದಾಲ್ ಕಾರ್ಖಾನೆಯ ಬಸ್ ಕ್ಲೀನರ್ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಕೃಷ್ಣಾನಗರದ ನಿವಾಸಿ, ಬಸ್ನ ಕ್ಲೀನರ್ ಹುಚ್ಚಪ್ಪ(45) ಮೃತ. ಬನ್ನಿಹಟ್ಟಿ ಗ್ರಾಮದ ಬಳಿ ಜಿಂದಾಲ್ ಬಸ್ ರಸ್ತೆಯಲ್ಲಿ ನಿಂತಿದ್ದಾಗ, ಬಸ್ಸಿನಿಂದ ಕೆಳಗಿಳಿದ ಕ್ಲೀನರ್, ಬಸ್ನ ಕೆಳಭಾಗವನ್ನು ಇಣುಕಿ ಪರಿಶೀಲಿಸುವಾಗ ಬಸ್ ಏಕಾಏಕಿ ಮುಂದಕ್ಕೆ ಚಲಿಸಿದ್ದರಿಂದ ದುರ್ಘಟನೆ ಸಂಭವಿಸಿದೆ.
‘ಮೃತನ ಸಹೋದರ ಕುಮಾರಸ್ವಾಮಿ ನೀಡಿದ ದೂರು ಅಧರಿಸಿ ಜಿಂದಾಲ್ ಬಸ್ ಸಮೇತ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತೋರಣಗಲ್ಲು ಠಾಣೆಯ ಪೊಲೀಸರು ತಿಳಿಸಿದ್ದಾರೆ.