<p><strong>ಕಂಪ್ಲಿ</strong>: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಒದಗಿಸುವಂತೆ ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು, ರೈತರು ಶಾಸಕ ಜೆ.ಎನ್. ಗಣೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.</p>.<p>ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ‘ಎರಡನೇ ಬೆಳೆಗೆ ನೀರು ಮತ್ತು ಮುಂಬರುವ ದಿನಗಳಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು ಕುರಿತು ಚರ್ಚಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.</p>.<p>‘ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆ, ಇತರೆ ಕಾಲುವೆಗೂ ಜನವರಿ ಕೊನೆಯವರೆಗೆ ನೀರು ಹರಿಸಿದರೂ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಉಳಿಯುತ್ತದೆ. ಅದರಿಂದ ನೂತನ ಗೇಟುಗಳ ಅಳವಡಿಕೆಗೆ ತೊಂದರೆಯಾಗುವುದಿಲ್ಲ. ಅಲ್ಲದೆ, ಫೆಬ್ರುವರಿಂದ ಜುಲೈವರೆಗೆ ಗೇಟುಗಳ ಅಳವಡಿಕೆಗೆ ಕಾಲಾವಕಾಶವಿರುತ್ತದೆ. ಈ ಕುರಿತು ಐಸಿಸಿ ಸಭೆಯಲ್ಲಿ ಒತ್ತಾಯಿಸಬೇಕು’ ಎಂದು ಶಾಸಕರಲ್ಲಿ ವಿನಂತಿಸಿದರು.</p>.<p>ರೈತ ಪ್ರಮುಖರಾದ ಕೊನೇರು ಶ್ರೀರಾಮಕೃಷ್ಣ, ಪೋಲೂರು ಸತ್ಯನಾರಾಯಣ, ಪಿ. ಮೂಕಯ್ಯಸ್ವಾಮಿ, ಕೆ. ಶ್ರೀನಿವಾಸರಾವ್, ದರೂರು ವೀರಭದ್ರನಾಯಕ, ಮುಷ್ಟಗಟ್ಟಿ ಭೀಮನಗೌಡ, ಗೆಣಕಿಹಾಳ್ ಶರಣನಗೌಡ, ಎಮ್ಮಿಗನೂರು ರಾಜಾಸಾಬ್, ಚನ್ನಪಟ್ಟಣ ಮಂಜುಗೌಡ, ಖಾಜಾವಲಿ, ಹಂಪಾದೇವನಹಳ್ಳಿ ರಾಜಶೇಖರಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಒದಗಿಸುವಂತೆ ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು, ರೈತರು ಶಾಸಕ ಜೆ.ಎನ್. ಗಣೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.</p>.<p>ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ‘ಎರಡನೇ ಬೆಳೆಗೆ ನೀರು ಮತ್ತು ಮುಂಬರುವ ದಿನಗಳಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು ಕುರಿತು ಚರ್ಚಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.</p>.<p>‘ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆ, ಇತರೆ ಕಾಲುವೆಗೂ ಜನವರಿ ಕೊನೆಯವರೆಗೆ ನೀರು ಹರಿಸಿದರೂ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಉಳಿಯುತ್ತದೆ. ಅದರಿಂದ ನೂತನ ಗೇಟುಗಳ ಅಳವಡಿಕೆಗೆ ತೊಂದರೆಯಾಗುವುದಿಲ್ಲ. ಅಲ್ಲದೆ, ಫೆಬ್ರುವರಿಂದ ಜುಲೈವರೆಗೆ ಗೇಟುಗಳ ಅಳವಡಿಕೆಗೆ ಕಾಲಾವಕಾಶವಿರುತ್ತದೆ. ಈ ಕುರಿತು ಐಸಿಸಿ ಸಭೆಯಲ್ಲಿ ಒತ್ತಾಯಿಸಬೇಕು’ ಎಂದು ಶಾಸಕರಲ್ಲಿ ವಿನಂತಿಸಿದರು.</p>.<p>ರೈತ ಪ್ರಮುಖರಾದ ಕೊನೇರು ಶ್ರೀರಾಮಕೃಷ್ಣ, ಪೋಲೂರು ಸತ್ಯನಾರಾಯಣ, ಪಿ. ಮೂಕಯ್ಯಸ್ವಾಮಿ, ಕೆ. ಶ್ರೀನಿವಾಸರಾವ್, ದರೂರು ವೀರಭದ್ರನಾಯಕ, ಮುಷ್ಟಗಟ್ಟಿ ಭೀಮನಗೌಡ, ಗೆಣಕಿಹಾಳ್ ಶರಣನಗೌಡ, ಎಮ್ಮಿಗನೂರು ರಾಜಾಸಾಬ್, ಚನ್ನಪಟ್ಟಣ ಮಂಜುಗೌಡ, ಖಾಜಾವಲಿ, ಹಂಪಾದೇವನಹಳ್ಳಿ ರಾಜಶೇಖರಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>