<p><strong>ಬಳ್ಳಾರಿ:</strong> ‘ಯೂರಿಯಾ ದಾಸ್ತಾನು ಇದ್ದರೂ ಇಲ್ಲ ಎಂದು ಹೇಳುತ್ತಿದ್ದ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಕಂಪ್ಲಿ ತಾಲೂಕಿನ ಐದು ರಸಗೊಬ್ಬರ ಮತ್ತು ಪರಿಕರ ಮಾರಾಟ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ. </p>.<p>ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿರುವ ಅವರು, ‘ಕುರುಗೋಡು ತಾಲೂಕಿನಲ್ಲಿ 54 ಚೀಲ ಯೂರಿಯಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೈತ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಾಹವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. </p>.<p>‘ಕಲಬುರಗಿಯ ‘ಭೀಮಾ ಕೃಷ್ಣಾ ರಾಸಾಯನಿಕ ಮತ್ತು ರಸಗೊಬ್ಬರ ಕಂಪನಿ’ಯಲ್ಲಿ ತಯಾರಾದ ಯೂರಿಯಾವನ್ನು ಕುರುಗೋಡಿಗೆ ಅಕ್ರಮವಾಗಿ ತಂದು, ವಾಹನದಲ್ಲಿಟ್ಟುಕೊಂಡು ಮಹಿಳೆ ಮಾರಾಟ ಮಾಡುತ್ತಿದ್ದರು‘ ಎಂದು ಹೇಳಿದರು. </p>.<p>‘ಯೂರಿಯಾ ಬಿಕ್ಕಟ್ಟು ನಿವಾರಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ನಿರಂತ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಸೋಮಸುಂದರ್ ಹೇಳಿದರು. </p>.<p>ರಸಗೊಬ್ಬರ ಕೊರತೆ ಇಲ್ಲ: ‘ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 44,350 ಮೆಟ್ರಿನ್ ಟನ್ ಯೂರಿಯಾ ಅಗತ್ಯವಿದೆ. ಇಲ್ಲಿವರೆಗೆ 37,668 ಮೆಟ್ರಿಕ್ ಟನ್ನಷ್ಟು ಪೂರೈಕೆಯಾಗಿದೆ. 5,114 ಟನ್ ದಾಸ್ತಾನು ಇದೆ. ಇನ್ನು ಎರಡು ದಿನಗಳಲ್ಲಿ 1,933 ಟನ್ ಬರುತ್ತಿದೆ’ ಎಂದು ಸೋಮಸುಂದರ್ ಮಾಹಿತಿ ನೀಡಿದ್ಧಾರೆ. </p>.<p>‘ರಸಗೊಬ್ಬರ ನಿರಂತರವಾಗಿ ಪೂರೈಕೆಯಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಭತ್ತದ ಕ್ಷೇತ್ರ ಹೆಚ್ಚಾಗಿರುವುದರಿಂದ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ರೈತರು ಶಿಫಾರಸಿನ ಪ್ರಮಾಣಕ್ಕಿಂತಲೂ ಹೆಚ್ಚು ಖರೀದಿ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ‘ಯೂರಿಯಾ ದಾಸ್ತಾನು ಇದ್ದರೂ ಇಲ್ಲ ಎಂದು ಹೇಳುತ್ತಿದ್ದ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಕಂಪ್ಲಿ ತಾಲೂಕಿನ ಐದು ರಸಗೊಬ್ಬರ ಮತ್ತು ಪರಿಕರ ಮಾರಾಟ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ. </p>.<p>ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿರುವ ಅವರು, ‘ಕುರುಗೋಡು ತಾಲೂಕಿನಲ್ಲಿ 54 ಚೀಲ ಯೂರಿಯಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೈತ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಾಹವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. </p>.<p>‘ಕಲಬುರಗಿಯ ‘ಭೀಮಾ ಕೃಷ್ಣಾ ರಾಸಾಯನಿಕ ಮತ್ತು ರಸಗೊಬ್ಬರ ಕಂಪನಿ’ಯಲ್ಲಿ ತಯಾರಾದ ಯೂರಿಯಾವನ್ನು ಕುರುಗೋಡಿಗೆ ಅಕ್ರಮವಾಗಿ ತಂದು, ವಾಹನದಲ್ಲಿಟ್ಟುಕೊಂಡು ಮಹಿಳೆ ಮಾರಾಟ ಮಾಡುತ್ತಿದ್ದರು‘ ಎಂದು ಹೇಳಿದರು. </p>.<p>‘ಯೂರಿಯಾ ಬಿಕ್ಕಟ್ಟು ನಿವಾರಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ನಿರಂತ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಸೋಮಸುಂದರ್ ಹೇಳಿದರು. </p>.<p>ರಸಗೊಬ್ಬರ ಕೊರತೆ ಇಲ್ಲ: ‘ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 44,350 ಮೆಟ್ರಿನ್ ಟನ್ ಯೂರಿಯಾ ಅಗತ್ಯವಿದೆ. ಇಲ್ಲಿವರೆಗೆ 37,668 ಮೆಟ್ರಿಕ್ ಟನ್ನಷ್ಟು ಪೂರೈಕೆಯಾಗಿದೆ. 5,114 ಟನ್ ದಾಸ್ತಾನು ಇದೆ. ಇನ್ನು ಎರಡು ದಿನಗಳಲ್ಲಿ 1,933 ಟನ್ ಬರುತ್ತಿದೆ’ ಎಂದು ಸೋಮಸುಂದರ್ ಮಾಹಿತಿ ನೀಡಿದ್ಧಾರೆ. </p>.<p>‘ರಸಗೊಬ್ಬರ ನಿರಂತರವಾಗಿ ಪೂರೈಕೆಯಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಭತ್ತದ ಕ್ಷೇತ್ರ ಹೆಚ್ಚಾಗಿರುವುದರಿಂದ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ರೈತರು ಶಿಫಾರಸಿನ ಪ್ರಮಾಣಕ್ಕಿಂತಲೂ ಹೆಚ್ಚು ಖರೀದಿ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>