<p><strong>ಬಳ್ಳಾರಿ:</strong> ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮೇಲೆ ಪ್ರಕರಣಗಳಿವೆ. ಜೈಲು ಪಾಲಾಗಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳುತ್ತಾರೆ. ಹಾಗಾದರೆ ಜನಾರ್ದನ ರೆಡ್ಡಿ ಮೇಲೆ ಯಾವುದೇ ಪ್ರಕರಣಗಳು ಇಲ್ಲವೇ, ನೀವು ಜೈಲಿಗೆ ಹೋಗಿ ಬಂದಿಲ್ಲವೇ ಎಂದು ವಾಲ್ಮೀಕಿ ಸಮುದಾಯದ ಯರಗುಡಿ ಮುದಿಮಲ್ಲಯ್ಯ ಆರೋಪಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜನಾರ್ದನ ರೆಡ್ಡಿಗೆ ನಾಗೇಂದ್ರ<br>ಅವರು ಬೇಕಾಗಿತ್ತು. ಈಗ ಬೇರೆ ಪಕ್ಷದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ಬಾಯಿಗೆ ಬಂದಂತೆ<br>ಮಾತನಾಡುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ಒಬ್ಬ ನಾಯಕನನ್ನು ಬೈದರೆ ನಾವು<br>ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.</p>.<p>‘ನಾಗೇಂದ್ರ ಅವರನ್ನು ರೌಡಿ, ಕ್ರಿಮಿನಲ್ ಎಂದು ಸಂಬೋಧನೆ ಮಾಡಿರುವ ಜನಾರ್ದನರೆಡ್ಡಿ ಅವರು ಸಮಯಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ’ ಎಂದರು.</p>.<p>‘ನಾಗೇಂದ್ರ ಅವರು ನಾಲ್ಕು ಬಾರಿ ಶಾಸಕರಾಗಿದ್ದವರು. ಜನರ ಪ್ರೀತಿ ಇಲ್ಲದಿದ್ದರೆ ನಾಲ್ಕು ಬಾರಿ ಶಾಸಕರಾಗಲು ಸಾಧ್ಯವೇ ? ಎಂದು ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಸಹೋದರ ಸೋಮಶೇಖರ ರೆಡ್ಡಿಯನ್ನೇ ನೀವು ಸೋಲಿಸಿದಿರಿ. ಸಮಯ ಬಂದಾಗ</p>.<p>ಸ್ವಾರ್ಥ ರಾಜಕಾರಣ ಮಾಡುತ್ತೀರಿ. ವಾಲ್ಮೀಕಿ ಸಮಾಜವನ್ನು ನಿಮಗೆ ಕಷ್ಟಕ್ಕೆ ಮಾತ್ರ<br />ಬಳಸಿಕೊಳ್ಳುತ್ತೀರಿ. ಈ ಹಿಂದೆ ನಾಗೇಂದ್ರ ಅವರು ನಿಮ್ಮ ಜೊತೆ ಇದ್ದಾಗ ರೌಡಿ ಎಂದು<br />ಗೊತ್ತಿರಲಿಲ್ಲವೇ ? ಈಗ ಗೊತ್ತಾಯಿತೇ ಎಂದು ಕೇಳಿದರಲ್ಲದೆ, ಇನ್ನು ಮುಂದೆ ನಾಗೇಂದ್ರ<br />ಅವರ ಬಗ್ಗೆ ಮಾತನಾಡಿದರೆ ವಾಲ್ಮೀಕಿ ಸಮುದಾಯ ಸುಮ್ಮನಿರುವುದಿಲ್ಲ ಎಂದು<br />ಎಚ್ಚರಿಸಿದರು.</p>.<p>ಪಕ್ಷದ ಮುಖಂಡರಾದ ಜಗನ್, ರಾಮ್ ಪ್ರಸಾದ್, ಪರುಶುರಾಮ್, ವಿಜಯಕುಮಾರ್<br />ಸಂಗನಕಲ್ಲು ಮತ್ತಿತರರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮೇಲೆ ಪ್ರಕರಣಗಳಿವೆ. ಜೈಲು ಪಾಲಾಗಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳುತ್ತಾರೆ. ಹಾಗಾದರೆ ಜನಾರ್ದನ ರೆಡ್ಡಿ ಮೇಲೆ ಯಾವುದೇ ಪ್ರಕರಣಗಳು ಇಲ್ಲವೇ, ನೀವು ಜೈಲಿಗೆ ಹೋಗಿ ಬಂದಿಲ್ಲವೇ ಎಂದು ವಾಲ್ಮೀಕಿ ಸಮುದಾಯದ ಯರಗುಡಿ ಮುದಿಮಲ್ಲಯ್ಯ ಆರೋಪಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜನಾರ್ದನ ರೆಡ್ಡಿಗೆ ನಾಗೇಂದ್ರ<br>ಅವರು ಬೇಕಾಗಿತ್ತು. ಈಗ ಬೇರೆ ಪಕ್ಷದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ಬಾಯಿಗೆ ಬಂದಂತೆ<br>ಮಾತನಾಡುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ಒಬ್ಬ ನಾಯಕನನ್ನು ಬೈದರೆ ನಾವು<br>ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.</p>.<p>‘ನಾಗೇಂದ್ರ ಅವರನ್ನು ರೌಡಿ, ಕ್ರಿಮಿನಲ್ ಎಂದು ಸಂಬೋಧನೆ ಮಾಡಿರುವ ಜನಾರ್ದನರೆಡ್ಡಿ ಅವರು ಸಮಯಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ’ ಎಂದರು.</p>.<p>‘ನಾಗೇಂದ್ರ ಅವರು ನಾಲ್ಕು ಬಾರಿ ಶಾಸಕರಾಗಿದ್ದವರು. ಜನರ ಪ್ರೀತಿ ಇಲ್ಲದಿದ್ದರೆ ನಾಲ್ಕು ಬಾರಿ ಶಾಸಕರಾಗಲು ಸಾಧ್ಯವೇ ? ಎಂದು ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಸಹೋದರ ಸೋಮಶೇಖರ ರೆಡ್ಡಿಯನ್ನೇ ನೀವು ಸೋಲಿಸಿದಿರಿ. ಸಮಯ ಬಂದಾಗ</p>.<p>ಸ್ವಾರ್ಥ ರಾಜಕಾರಣ ಮಾಡುತ್ತೀರಿ. ವಾಲ್ಮೀಕಿ ಸಮಾಜವನ್ನು ನಿಮಗೆ ಕಷ್ಟಕ್ಕೆ ಮಾತ್ರ<br />ಬಳಸಿಕೊಳ್ಳುತ್ತೀರಿ. ಈ ಹಿಂದೆ ನಾಗೇಂದ್ರ ಅವರು ನಿಮ್ಮ ಜೊತೆ ಇದ್ದಾಗ ರೌಡಿ ಎಂದು<br />ಗೊತ್ತಿರಲಿಲ್ಲವೇ ? ಈಗ ಗೊತ್ತಾಯಿತೇ ಎಂದು ಕೇಳಿದರಲ್ಲದೆ, ಇನ್ನು ಮುಂದೆ ನಾಗೇಂದ್ರ<br />ಅವರ ಬಗ್ಗೆ ಮಾತನಾಡಿದರೆ ವಾಲ್ಮೀಕಿ ಸಮುದಾಯ ಸುಮ್ಮನಿರುವುದಿಲ್ಲ ಎಂದು<br />ಎಚ್ಚರಿಸಿದರು.</p>.<p>ಪಕ್ಷದ ಮುಖಂಡರಾದ ಜಗನ್, ರಾಮ್ ಪ್ರಸಾದ್, ಪರುಶುರಾಮ್, ವಿಜಯಕುಮಾರ್<br />ಸಂಗನಕಲ್ಲು ಮತ್ತಿತರರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>