<p><strong>ಹಗರಿಬೊಮ್ಮನಹಳ್ಳಿ:</strong> ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಜಗತ್ತಿನ ಎಲ್ಲ ಕಡೆಗೂ ಮೆರೆಸಿದರು ಎಂದು ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.</p>.<p>ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶನಿವಾರದಿಂದ ಆಯೋಜಿಸಲಾಗಿದ್ದ ವಿವೇಕಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವಿವೇಕಾನಂದರ ಸಾಧನೆಗೆ ಯೋಗ ಸಹಕಾರಿಯಾಗಿದೆ, ಸಾಧನೆಯ ಶಿಖರವನ್ನೇರಲು ಯೋಗ ಮತ್ತು ಧ್ಯಾನ ಅಗತ್ಯವಾಗಿದೆ. ಪ್ರಾಣಯಾಮ, ಮಾನಸಿಕ ಧ್ಯಾನ, ಸ್ವಾಧೀನತೆಯಂಥಹ ಏಕಾಗ್ರತೆಯ ಸಾಧನೆಯನ್ನು ಸ್ವಾಮಿ ವಿವೇಕಾನಂದರು ಮಾಡಿದ್ದರು. ಆ ದಾರಿಯಲ್ಲಿ ಸಾಗಿದರೆ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.</p>.<p>ವಿದ್ಯಾಕೇಂದ್ರದ ಕಾರ್ಯದರ್ಶಿ ಬಿ.ಬಸವನಗೌಡ ಮಾತನಾಡಿ, ಮೂರು ದಿನಗಳು ವಿವೇಕ ಸ್ಮರಣೆ ನಡೆಯಲಿದೆ, ಯೋಗ ಮತ್ತು ಧ್ಯಾನ ಶಿಬಿರ ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ ಎಂದರು.</p>.<p>ಕೇಂದ್ರದ ಸೋಮನಗೌಡ್ರು, ಸಂಸ್ಥೆಯ ಸಹ ಕಾರ್ಯದರ್ಶಿ ಡಿ.ದುರುಗಣ್ಣ, ಪದ್ಮಾ ವಿಠಲ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಪಾಪಣ್ಣ, ಮಂಜುನಾಥ, ಆರ್.ಕೊಟ್ರಪ್ಪ, ವೀರೇಶ್, ವೆಂಕಟೇಶ, ರಂಗನಾಥ, ಎ.ಎಂ.ದಾನಯ್ಯ, ಬಿ.ರಮೇಶ, ಬಿ.ನಟರಾಜ, ಎಸ್.ಸುಭಾಷ್, ಡಾ.ಅಜ್ಜಯ್ಯ, ಡಾ.ವಿಶ್ವನಾಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಜಗತ್ತಿನ ಎಲ್ಲ ಕಡೆಗೂ ಮೆರೆಸಿದರು ಎಂದು ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.</p>.<p>ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶನಿವಾರದಿಂದ ಆಯೋಜಿಸಲಾಗಿದ್ದ ವಿವೇಕಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವಿವೇಕಾನಂದರ ಸಾಧನೆಗೆ ಯೋಗ ಸಹಕಾರಿಯಾಗಿದೆ, ಸಾಧನೆಯ ಶಿಖರವನ್ನೇರಲು ಯೋಗ ಮತ್ತು ಧ್ಯಾನ ಅಗತ್ಯವಾಗಿದೆ. ಪ್ರಾಣಯಾಮ, ಮಾನಸಿಕ ಧ್ಯಾನ, ಸ್ವಾಧೀನತೆಯಂಥಹ ಏಕಾಗ್ರತೆಯ ಸಾಧನೆಯನ್ನು ಸ್ವಾಮಿ ವಿವೇಕಾನಂದರು ಮಾಡಿದ್ದರು. ಆ ದಾರಿಯಲ್ಲಿ ಸಾಗಿದರೆ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.</p>.<p>ವಿದ್ಯಾಕೇಂದ್ರದ ಕಾರ್ಯದರ್ಶಿ ಬಿ.ಬಸವನಗೌಡ ಮಾತನಾಡಿ, ಮೂರು ದಿನಗಳು ವಿವೇಕ ಸ್ಮರಣೆ ನಡೆಯಲಿದೆ, ಯೋಗ ಮತ್ತು ಧ್ಯಾನ ಶಿಬಿರ ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ ಎಂದರು.</p>.<p>ಕೇಂದ್ರದ ಸೋಮನಗೌಡ್ರು, ಸಂಸ್ಥೆಯ ಸಹ ಕಾರ್ಯದರ್ಶಿ ಡಿ.ದುರುಗಣ್ಣ, ಪದ್ಮಾ ವಿಠಲ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಪಾಪಣ್ಣ, ಮಂಜುನಾಥ, ಆರ್.ಕೊಟ್ರಪ್ಪ, ವೀರೇಶ್, ವೆಂಕಟೇಶ, ರಂಗನಾಥ, ಎ.ಎಂ.ದಾನಯ್ಯ, ಬಿ.ರಮೇಶ, ಬಿ.ನಟರಾಜ, ಎಸ್.ಸುಭಾಷ್, ಡಾ.ಅಜ್ಜಯ್ಯ, ಡಾ.ವಿಶ್ವನಾಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>