ಹೆರಿಗೆ ದಿನದ ಗಡುವು ಮುಕ್ತಾಯಗೊಂಡು ಗುರುವಾರ ತುರ್ತು ಚಿಕಿತ್ಸೆಗೆಂದು ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದರು. ಶಸ್ತ್ರಚಿಕಿತ್ಸೆ ತಜ್ಞ ಡಾ.ರಾಜೇಶ್ ಮತ್ತು ಅರವಳಿಕೆ ತಜ್ಞ ವೈದ್ಯ ಡಾ.ವಿನಯ್ ಅವರು ಗರ್ಭಿಣಿಯನ್ನು ಪರಿಶೀಲಿಸಿದಾಗ, ಅಸಹಜ ಹೊಟ್ಟೆ ಆಕಾರ ಕಂಡುಬಂದಿದೆ. ತಕ್ಷಣವೇ ಶಸ್ತ್ರ ಚಿಕಿತ್ಸೆ ಮಾಡಿ, ಗರ್ಭಾಶಯದಲ್ಲಿದ್ದ ಹೆಣ್ಣು ಮಗುವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಮತ್ತೊಂದು ಗರ್ಭಕೋಶ ಆರೋಗ್ಯಕರವಾಗಿದೆ.