<p><strong>ಕುರುಗೋಡು: </strong>ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗ ಬಹುದು ಎಂದು ವೈದ್ಯಾಧಿಕಾರಿ ಡಾ.ರಾಘವೇಂದ್ರ ಹೇಳಿದರು.<br /> <br /> ಇಲ್ಲಿಗೆ ಸಮೀಪದ ಕೋಳೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಜರಾಜೇಶ್ವರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಕ್ತದಾನ ಮಾಡಿ ಸಂಕಷ್ಟದಲ್ಲಿರುವವರ ಜೀವವನ್ನು ರಕ್ಷಿಸುವಂತೆ ಸಲಹೆ ಮಾಡಿದರು. <br /> <br /> ಆರೋಗ್ಯ ಸಹಾಯಕ ಎಸ್. ರಾಘವ ಶೆಟ್ಟಿ ಮಾತನಾಡಿದರು. ರಾಜರಾಜೇಶ್ವರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಜಿ.ರಮೇಶ್ ಉದ್ಘಾಟಿಸಿದರು.<br /> <br /> ಗ್ರಾಮದ ಯುವಕರು, ಸಂಘಸಂಸ್ಥೆ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಒಟ್ಟು 55 ಜನರು ಶಿಬಿರದಲ್ಲಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು.<br /> <br /> ಎಂ.ಡಿ. ಮಹ್ಮದ್ ಖಾಸೀಂ ನಿರೂಪಿಸಿದರು. ಟಿ.ಎಂ. ಮೃತ್ಯುಂಜಯ ಸ್ವಾಮಿ ಸ್ವಾಗತಿಸಿದರು. ಕುಮಾರಗೌಡ ವಂದಿಸಿದರು.<br /> <br /> <strong>ಮಧ್ವನವಮಿ ಇಂದಿನಿಂದ</strong><br /> <strong>ಹೊಸಪೇಟೆ:</strong> ಸ್ಥಳೀಯ ಶ್ರೀ ವಿಠಲಕೃಷ್ಣ ಟ್ರಸ್ಟ್ ಇದೇ 25 ರಿಂದ ಮಧ್ವನವಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. <br /> <br /> ವಡಕರಾಯಸ್ವಾಮಿ ದೇವಸ್ಥಾನ ದಲ್ಲಿ ಇದೇ 31ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿನಿತ್ಯವೂ ವಾಯು ಸ್ತುತಿ ಪುನಶ್ಚರಣ ಅಭಿಷೇಕ, ಪೂಜೆ ಉಪನ್ಯಾಸ, ಸ್ವಸ್ತಿವಾಚನ, ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.<br /> <br /> ವೆಂಕಟೇಶಾಚಾರ್ ಅವರಿಂದ ಶ್ರೀ ಮದ್ಭಾಗವತ ಪ್ರವಚನ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.<br /> <br /> <strong>ಪುಣ್ಯಾರಾಧನೆ ಇಂದಿನಿಂದ<br /> ಹೊಸಪೇಟೆ: </strong>ಬ್ರಹ್ಮಶ್ರೀ ಸಂಹಾದ್ರಿ ಸದ್ಗುರು ಸ್ವಾಮಿಗಳ 10ನೇ ಪುಣ್ಯಾರಾಧನೆಯನ್ನು ಸ್ಥಳೀಯ ಚಪ್ಪರದಹಳ್ಳಿ ಅಂಬಾಭವಾನಿ ದೇವಸ್ಥಾನದಲ್ಲಿ ಇದೇ 25ರಿಂದ ಹಮ್ಮಿಕೊಳ್ಳಲಾಗಿದೆ. <br /> <br /> 25ರಿಂದ 28 ರವರೆಗೆ ನಡೆಯುವ ಕಾರ್ಯಕ್ರಮಕ್ಕೆ 25 ರಂದು ರಂದು ಬೆಳಿಗ್ಗೆ 7-30ಕ್ಕೆ ಓಂಕಾರ ಪೀಠದ ಪೂಜ್ಯ ಸದ್ಗುರುಮೂರ್ತಿ ಸ್ವಾಮಿಗಳ ಪುಣ್ಯಾರಾಧನೆಗೆ ಚಾಲನೆ ನೀಡುವರು.<br /> <br /> ಸದ್ಗುರುಗಳ ವಿಚಾರಧಾರೆಯ ಆಧ್ಯಾತ್ಮ ವಿಚಾರ ಗೋಷ್ಠಿಗಳ ನಡೆಯಲಿದೆ ಎಂದು ನರಹರಿ ಆಶ್ರಮದ ಕಾರ್ಯಕಾರಿ ಮಂಡಳಿ ಕೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು: </strong>ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗ ಬಹುದು ಎಂದು ವೈದ್ಯಾಧಿಕಾರಿ ಡಾ.ರಾಘವೇಂದ್ರ ಹೇಳಿದರು.<br /> <br /> ಇಲ್ಲಿಗೆ ಸಮೀಪದ ಕೋಳೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಜರಾಜೇಶ್ವರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಕ್ತದಾನ ಮಾಡಿ ಸಂಕಷ್ಟದಲ್ಲಿರುವವರ ಜೀವವನ್ನು ರಕ್ಷಿಸುವಂತೆ ಸಲಹೆ ಮಾಡಿದರು. <br /> <br /> ಆರೋಗ್ಯ ಸಹಾಯಕ ಎಸ್. ರಾಘವ ಶೆಟ್ಟಿ ಮಾತನಾಡಿದರು. ರಾಜರಾಜೇಶ್ವರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಜಿ.ರಮೇಶ್ ಉದ್ಘಾಟಿಸಿದರು.<br /> <br /> ಗ್ರಾಮದ ಯುವಕರು, ಸಂಘಸಂಸ್ಥೆ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಒಟ್ಟು 55 ಜನರು ಶಿಬಿರದಲ್ಲಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು.<br /> <br /> ಎಂ.ಡಿ. ಮಹ್ಮದ್ ಖಾಸೀಂ ನಿರೂಪಿಸಿದರು. ಟಿ.ಎಂ. ಮೃತ್ಯುಂಜಯ ಸ್ವಾಮಿ ಸ್ವಾಗತಿಸಿದರು. ಕುಮಾರಗೌಡ ವಂದಿಸಿದರು.<br /> <br /> <strong>ಮಧ್ವನವಮಿ ಇಂದಿನಿಂದ</strong><br /> <strong>ಹೊಸಪೇಟೆ:</strong> ಸ್ಥಳೀಯ ಶ್ರೀ ವಿಠಲಕೃಷ್ಣ ಟ್ರಸ್ಟ್ ಇದೇ 25 ರಿಂದ ಮಧ್ವನವಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. <br /> <br /> ವಡಕರಾಯಸ್ವಾಮಿ ದೇವಸ್ಥಾನ ದಲ್ಲಿ ಇದೇ 31ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿನಿತ್ಯವೂ ವಾಯು ಸ್ತುತಿ ಪುನಶ್ಚರಣ ಅಭಿಷೇಕ, ಪೂಜೆ ಉಪನ್ಯಾಸ, ಸ್ವಸ್ತಿವಾಚನ, ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.<br /> <br /> ವೆಂಕಟೇಶಾಚಾರ್ ಅವರಿಂದ ಶ್ರೀ ಮದ್ಭಾಗವತ ಪ್ರವಚನ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.<br /> <br /> <strong>ಪುಣ್ಯಾರಾಧನೆ ಇಂದಿನಿಂದ<br /> ಹೊಸಪೇಟೆ: </strong>ಬ್ರಹ್ಮಶ್ರೀ ಸಂಹಾದ್ರಿ ಸದ್ಗುರು ಸ್ವಾಮಿಗಳ 10ನೇ ಪುಣ್ಯಾರಾಧನೆಯನ್ನು ಸ್ಥಳೀಯ ಚಪ್ಪರದಹಳ್ಳಿ ಅಂಬಾಭವಾನಿ ದೇವಸ್ಥಾನದಲ್ಲಿ ಇದೇ 25ರಿಂದ ಹಮ್ಮಿಕೊಳ್ಳಲಾಗಿದೆ. <br /> <br /> 25ರಿಂದ 28 ರವರೆಗೆ ನಡೆಯುವ ಕಾರ್ಯಕ್ರಮಕ್ಕೆ 25 ರಂದು ರಂದು ಬೆಳಿಗ್ಗೆ 7-30ಕ್ಕೆ ಓಂಕಾರ ಪೀಠದ ಪೂಜ್ಯ ಸದ್ಗುರುಮೂರ್ತಿ ಸ್ವಾಮಿಗಳ ಪುಣ್ಯಾರಾಧನೆಗೆ ಚಾಲನೆ ನೀಡುವರು.<br /> <br /> ಸದ್ಗುರುಗಳ ವಿಚಾರಧಾರೆಯ ಆಧ್ಯಾತ್ಮ ವಿಚಾರ ಗೋಷ್ಠಿಗಳ ನಡೆಯಲಿದೆ ಎಂದು ನರಹರಿ ಆಶ್ರಮದ ಕಾರ್ಯಕಾರಿ ಮಂಡಳಿ ಕೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>