<p><strong>ತೂಬಗೆರೆ (ದೊಡ್ಡಬಳ್ಳಾಪುರ):</strong> ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಹುಂಡಿಯಲ್ಲಿನ ಹಣ ಎಣಿಕೆ ವೇಳೆ ಪ್ರೇಮಿಯೊಬ್ಬ ರಕ್ತದಲ್ಲಿ ಬರೆದಿರುವ ಪ್ರೇಮ ಪತ್ರ ದೊರೆತಿದೆ.</p>.<p>ತಾನು ಪ್ರೀತಿಸುತ್ತಿರುವ ಹುಡುಗಿಯೇ ಜೋಡಿಯಾಗುವಂತೆ ದೇವರಿಗೆ ಪತ್ರದ ಮೂಲಕ ಹರಕೆ ಮಾಡಿಕೊಂಡಿದ್ದಾನೆ. ಪ್ರೇಮಿಗಳಿಬ್ಬರು ಜೋಡಿಯಾಗಿ ಇರುವ ಫೋಟೊ ಇದ್ದು, ಅದರ ಹಿಂಬದಿಯಲ್ಲಿ ಪ್ರೇಮಿ ನಿವೇದಿಸಿಕೊಂಡಿರುವ ಒಕ್ಕಣೆ ಇದೆ. </p>.<p>ರಥೋತ್ಸವದ ನಂತರ ನಡೆದ ಘಾಟಿ ದೇಗುಲದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು ₹85 ಲಕ್ಷ ಸಂಗ್ರಹವಾಗಿದೆ. ಇದರೊಂದಿಗೆ ₹52,350 ಮೌಲ್ಯದ 11 ಗ್ರಾಂ 900 ಮಿಲಿ ಚಿನ್ನ, ₹72,100 ಮೌಲ್ಯದ 5 ಕೆ.ಜಿ 50 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.</p>.<p>ಎಣಿಕೆ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ. ಹೇಮಾವತಿ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಡಿ. ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್. ಸುಬ್ಬಕೃಷ್ಣಶಾಸ್ತ್ರಿ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸರು<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೂಬಗೆರೆ (ದೊಡ್ಡಬಳ್ಳಾಪುರ):</strong> ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಹುಂಡಿಯಲ್ಲಿನ ಹಣ ಎಣಿಕೆ ವೇಳೆ ಪ್ರೇಮಿಯೊಬ್ಬ ರಕ್ತದಲ್ಲಿ ಬರೆದಿರುವ ಪ್ರೇಮ ಪತ್ರ ದೊರೆತಿದೆ.</p>.<p>ತಾನು ಪ್ರೀತಿಸುತ್ತಿರುವ ಹುಡುಗಿಯೇ ಜೋಡಿಯಾಗುವಂತೆ ದೇವರಿಗೆ ಪತ್ರದ ಮೂಲಕ ಹರಕೆ ಮಾಡಿಕೊಂಡಿದ್ದಾನೆ. ಪ್ರೇಮಿಗಳಿಬ್ಬರು ಜೋಡಿಯಾಗಿ ಇರುವ ಫೋಟೊ ಇದ್ದು, ಅದರ ಹಿಂಬದಿಯಲ್ಲಿ ಪ್ರೇಮಿ ನಿವೇದಿಸಿಕೊಂಡಿರುವ ಒಕ್ಕಣೆ ಇದೆ. </p>.<p>ರಥೋತ್ಸವದ ನಂತರ ನಡೆದ ಘಾಟಿ ದೇಗುಲದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು ₹85 ಲಕ್ಷ ಸಂಗ್ರಹವಾಗಿದೆ. ಇದರೊಂದಿಗೆ ₹52,350 ಮೌಲ್ಯದ 11 ಗ್ರಾಂ 900 ಮಿಲಿ ಚಿನ್ನ, ₹72,100 ಮೌಲ್ಯದ 5 ಕೆ.ಜಿ 50 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.</p>.<p>ಎಣಿಕೆ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ. ಹೇಮಾವತಿ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಡಿ. ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್. ಸುಬ್ಬಕೃಷ್ಣಶಾಸ್ತ್ರಿ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸರು<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>