ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾದಂತೆ ಊರಿನತ್ತ ತೆರಳು ಅವಕಾಶ ಸಿಗಲಿಲ್ಲ. ಲಾಕ್ಡಾನ್ ಸಂದರ್ಭದಲ್ಲಿ ಯಾರಾದರೂ ಊಟ ಕೊಟ್ಟರೆ ಅದೇ ಆಸರೆಯಾಗಿತ್ತು. ಹಳ್ಳ – ಕೊಳ್ಳದ ನೀರು ಕುಡಿದು ಜೀವನ ಸಾಗಿಸಬೇಕಾಯಿತು. ಮೊಬೈಲ್ಗಳಿಗೆ ಜಾರ್ಚ್ ಇಲ್ಲದೆ ಗ್ರಾಮದ ಸಂಪರ್ಕ ಕಳೆದುಕೊಂಡಿದ್ದೇವು. ಈಗ ಲಾಕ್ಡೌನ್ ಹಂತ ಹಂತವಾಗಿ ಮುಗಿಯುತ್ತಾ ಬಂದಿದ್ದು ಊರಿನತ್ತ ಹೊರಟಿರುವುದಾಗಿ ಕುರಿಗಾಹಿಗಳು ಕಷ್ಟ ಹೇಳಿಕೊಂಡರು.