<p><strong>ಸಾಸಲು(ದೊಡ್ಡಬಳ್ಳಾಪುರ):</strong> ಕೃಷಿ ಜಮೀನುಗಳಲ್ಲಿ ಕೊಳವೆಬಾವಿಗಳಿಗೆ ಅಳವಡಿಸಿದ್ದ ಕೇಬಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನತ್ತಿದ ರೈತರು ಕಳವಿಗೆ ಬಳಸಿದ್ದ ವಾಹನವನ್ನು ಹಿಡಿದಿದ್ದಾರೆ. ಆದರೆ ಕಳ್ಳರು ಪರಾರಿಯಾಗಿದ್ದಾರೆ.</p>.<p>ತಾಲ್ಲೂಕಿನ ಸಾಸಲು ಹೋಬಳಿಯ ನಾಗಲಾಪುರದಲ್ಲಿ ಶನಿವಾರ ತಡ ರಾತ್ರಿ 2 ಗಂಟೆ ಸುಮಾರಿಗೆ ಕೊಳವೆಬಾವಿಗೆ ಹಾಕಲಾಗಿದ್ದ ಕೇಬಲ್ ಕದ್ದು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಕಳ್ಳರನ್ನು ಬೆನ್ನಟ್ಟಿದ ರೈತರು ವಾಹನ ಹಿಡಿಯುಲ್ಲಿ ಯಶಸ್ವಿಯಾಗಿದ್ದಾರೆ. ರೈತರನ್ನು ಕಂಡೊಡನೆ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.</p>.<p>ಘಟನೆ ಬಳಿಕ ಭಾನುವಾರ ಬೆಳಗ್ಗೆ ನಾಗಲಾಪುರದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಹಿಡಿದು ರೈತರು ಹಿಡಿದು ತಮ್ಮ ಕಾರಿಲ್ಲಿ ಕೂರಿಸಿದಾಗ ಮತ್ತೊಂದು ಬಾಗಿಲು ತೆರೆದು ಪರಾರಿಯಾಗಿದ್ದಾನೆ.</p>.<p>ವಾಹನದಲ್ಲಿ ವಿವಿಧ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಕತ್ತರಿಸಲಾಗಿದ್ದ ಕೇಬಲ್ ತುಂಡುಗಳು ಪತ್ತೆಯಾಗಿವೆ. ವಾಹನ ಯಲಹಂಕ ಆರ್ಟಿಒ ಕಚೇರಿಯಲ್ಲಿ ನೋಂದಣಿ ಆಗಿರುವ ದಾಖಲೆ ಪತ್ತೆಯಾಗಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಮೊಬೈಲ್ ಹಾಗೂ ವಾಹನವನ್ನು ರೈತರು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಸೂಲುಕುಂಟೆ, ಚನ್ನವೀರನಹಳ್ಳಿ, ಬೆನಕಿನಮಡಗು, ಕಾಡು ಆಲಪ್ಪನಹಳ್ಳಿ, ಸಾಸಲು, ಬೋವಿಪಾಳ್ಯ ಗ್ರಾಮದ ರೈತರ ಜಮೀನುಗಳ ಕೊಳವೆ ಬಾವಿಗಳಿಂದ ಕೇಬಲ್ ಕದಿಯಲಾಗಿದೆ ಎಂದು ರೈತರು ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ದೊಡ್ಡಬೆಳವಂಗಲ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸಲು(ದೊಡ್ಡಬಳ್ಳಾಪುರ):</strong> ಕೃಷಿ ಜಮೀನುಗಳಲ್ಲಿ ಕೊಳವೆಬಾವಿಗಳಿಗೆ ಅಳವಡಿಸಿದ್ದ ಕೇಬಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನತ್ತಿದ ರೈತರು ಕಳವಿಗೆ ಬಳಸಿದ್ದ ವಾಹನವನ್ನು ಹಿಡಿದಿದ್ದಾರೆ. ಆದರೆ ಕಳ್ಳರು ಪರಾರಿಯಾಗಿದ್ದಾರೆ.</p>.<p>ತಾಲ್ಲೂಕಿನ ಸಾಸಲು ಹೋಬಳಿಯ ನಾಗಲಾಪುರದಲ್ಲಿ ಶನಿವಾರ ತಡ ರಾತ್ರಿ 2 ಗಂಟೆ ಸುಮಾರಿಗೆ ಕೊಳವೆಬಾವಿಗೆ ಹಾಕಲಾಗಿದ್ದ ಕೇಬಲ್ ಕದ್ದು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಕಳ್ಳರನ್ನು ಬೆನ್ನಟ್ಟಿದ ರೈತರು ವಾಹನ ಹಿಡಿಯುಲ್ಲಿ ಯಶಸ್ವಿಯಾಗಿದ್ದಾರೆ. ರೈತರನ್ನು ಕಂಡೊಡನೆ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.</p>.<p>ಘಟನೆ ಬಳಿಕ ಭಾನುವಾರ ಬೆಳಗ್ಗೆ ನಾಗಲಾಪುರದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಹಿಡಿದು ರೈತರು ಹಿಡಿದು ತಮ್ಮ ಕಾರಿಲ್ಲಿ ಕೂರಿಸಿದಾಗ ಮತ್ತೊಂದು ಬಾಗಿಲು ತೆರೆದು ಪರಾರಿಯಾಗಿದ್ದಾನೆ.</p>.<p>ವಾಹನದಲ್ಲಿ ವಿವಿಧ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಕತ್ತರಿಸಲಾಗಿದ್ದ ಕೇಬಲ್ ತುಂಡುಗಳು ಪತ್ತೆಯಾಗಿವೆ. ವಾಹನ ಯಲಹಂಕ ಆರ್ಟಿಒ ಕಚೇರಿಯಲ್ಲಿ ನೋಂದಣಿ ಆಗಿರುವ ದಾಖಲೆ ಪತ್ತೆಯಾಗಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಮೊಬೈಲ್ ಹಾಗೂ ವಾಹನವನ್ನು ರೈತರು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಸೂಲುಕುಂಟೆ, ಚನ್ನವೀರನಹಳ್ಳಿ, ಬೆನಕಿನಮಡಗು, ಕಾಡು ಆಲಪ್ಪನಹಳ್ಳಿ, ಸಾಸಲು, ಬೋವಿಪಾಳ್ಯ ಗ್ರಾಮದ ರೈತರ ಜಮೀನುಗಳ ಕೊಳವೆ ಬಾವಿಗಳಿಂದ ಕೇಬಲ್ ಕದಿಯಲಾಗಿದೆ ಎಂದು ರೈತರು ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ದೊಡ್ಡಬೆಳವಂಗಲ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>