ನಾಲ್ಕು ತಾಲ್ಲೂಕನ್ನು ಉಪನಗರವಾಗಿಸಿ: ಮುನಿಯಪ್ಪ
ಜಿಲ್ಲೆಯ ನಾಲ್ಕೂ ತಾಲ್ಲೂಕನ್ನು ಉಪ ನಗರವಾಗಿ ಅಭಿವೃದ್ಧಿಗೊಳಿಸಿ ಮೆಟ್ರೊ ಕಾವೇರಿ ನೀರು ಕೊಡಬೇಕು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾಗಿ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರು ಒದಗಿಸಬೇಕು. ಈ ಭಾಗದಲ್ಲಿ 5 ಸಾವಿರ ಕೆರೆಗಳಿವೆ. ಇವುಗಳಿಗೆ ಸಮಗ್ರ ಯೊಜನೆ ಮಾಡಿ ಹೂಳು ತೆಗೆದು ಕೆರೆ ತುಂಬಿಸುವ ಕೆಲಸ ಆಗಬೇಕಿದೆ. ಅದಾದಲ್ಲಿ ಅಂತರ್ಜಲ ತಂತಾನೆ ವೃದ್ಧಿಯಾಗುತ್ತದೆ. ಆಗ ಕೃಷಿಯನ್ನೇ ನಂಬಿರುವ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.