<p><strong>ಹೊಸಕೋಟೆ:</strong> ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಆನೇಕಲ್ನಲ್ಲಿ ಬತ್ತಿ ಹೋಗಿದ್ದ ಕೆರೆಗಳನ್ನು ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಮೂಲಕ ತುಂಬಿಸಲಾಯಿತು. ಅನೇಕಲ್ ಮತ್ತು ಹೊಸಕೇಟೆ, ಕಾಡುಬೀಸನಹಳ್ಳಿ ಕೆರೆಗಳನ್ನು ಕೂಡ ತುಂಬಿಸಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.<p>ಹೊಸಕೋಟೆ ತಾಲ್ಲೂಕಿನಲ್ಲಿ ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಗಳಿಗೆ ಹೊರತುಪಡಿಸಿ ಉಳಿತ ಎಲ್ಲಾ ಹೋಬಳಿಗಳಿಗೂ ನೀರು ಹರಿದಿದೆ. ಇದರಿಂದ ಅಂಜರ್ತಲವೂ ವೃದ್ಧಿಯಾಗಿ ನೀರಿನ ಸಮಸ್ಯೆ ಕಡಿಮೆಯಾಗಿದೆ.</p>.<p>ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಹೊಸದಾಗಿ ನಂದಗುಡಿ, ಸೂಲಿಬೆಲೆ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ ಎಂದರು.</p>.<p>ವಿವಿಧ ಯೋಜನೆಗಳ ಮೂಲಕ ಸಂಸ್ಕರಿಸಿದ ಒಟ್ಟು 15.5 ಟಿಎಂಸಿ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುತ್ತಿದ್ದೇವೆ ಎಂದರು.</p>.<p>ಎರಡು ಹಂತಗಳಲ್ಲಿ ಈ ಯೋಜನೆ ಜಾರಗೆ ತರಲು ಉದ್ದೇಶಿಸಿದ್ದೇವೆ. ಮೊದಲನೆ ಹಂತದಲ್ಲಿ 317 ಕೆರೆಗಳಿಗೆ ₹2,809 ಕೋಟಿ ವೆಚ್ಚದಲ್ಲಿ ಸಂಸ್ಕರಿಸಿದ ನೀರು ಹರಿಸಲಾಗಿದೆ. ಎರಡನೇ ಹಂತದಲ್ಲಿ ₹1,699 ಕೋಟಿ ವೆಚ್ಚದಲ್ಲಿ 392 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.</p>.<p>ಮೊದಲನೆ ಹಂತದಲ್ಲಿ ಹೊಸಕೋಟೆಯ 38 ಕೆರೆಗಳಿಗೆ ಸುಮಾರು ₹150 ಕೋಟಿ ವೆಚ್ಚದಲ್ಲಿ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಹೋಬಳಿಗಳಿಗೂ ನೀರು ಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದ್ದೇವೆ ಎಂದರು.</p>.<p><strong>ನಾಲ್ಕು ತಾಲ್ಲೂಕನ್ನು ಉಪನಗರವಾಗಿಸಿ: ಮುನಿಯಪ್ಪ</strong></p><p>ಜಿಲ್ಲೆಯ ನಾಲ್ಕೂ ತಾಲ್ಲೂಕನ್ನು ಉಪ ನಗರವಾಗಿ ಅಭಿವೃದ್ಧಿಗೊಳಿಸಿ ಮೆಟ್ರೊ ಕಾವೇರಿ ನೀರು ಕೊಡಬೇಕು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾಗಿ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು.</p><p> ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರು ಒದಗಿಸಬೇಕು. ಈ ಭಾಗದಲ್ಲಿ 5 ಸಾವಿರ ಕೆರೆಗಳಿವೆ. ಇವುಗಳಿಗೆ ಸಮಗ್ರ ಯೊಜನೆ ಮಾಡಿ ಹೂಳು ತೆಗೆದು ಕೆರೆ ತುಂಬಿಸುವ ಕೆಲಸ ಆಗಬೇಕಿದೆ. ಅದಾದಲ್ಲಿ ಅಂತರ್ಜಲ ತಂತಾನೆ ವೃದ್ಧಿಯಾಗುತ್ತದೆ. ಆಗ ಕೃಷಿಯನ್ನೇ ನಂಬಿರುವ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಆನೇಕಲ್ನಲ್ಲಿ ಬತ್ತಿ ಹೋಗಿದ್ದ ಕೆರೆಗಳನ್ನು ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಮೂಲಕ ತುಂಬಿಸಲಾಯಿತು. ಅನೇಕಲ್ ಮತ್ತು ಹೊಸಕೇಟೆ, ಕಾಡುಬೀಸನಹಳ್ಳಿ ಕೆರೆಗಳನ್ನು ಕೂಡ ತುಂಬಿಸಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.<p>ಹೊಸಕೋಟೆ ತಾಲ್ಲೂಕಿನಲ್ಲಿ ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಗಳಿಗೆ ಹೊರತುಪಡಿಸಿ ಉಳಿತ ಎಲ್ಲಾ ಹೋಬಳಿಗಳಿಗೂ ನೀರು ಹರಿದಿದೆ. ಇದರಿಂದ ಅಂಜರ್ತಲವೂ ವೃದ್ಧಿಯಾಗಿ ನೀರಿನ ಸಮಸ್ಯೆ ಕಡಿಮೆಯಾಗಿದೆ.</p>.<p>ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಹೊಸದಾಗಿ ನಂದಗುಡಿ, ಸೂಲಿಬೆಲೆ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ ಎಂದರು.</p>.<p>ವಿವಿಧ ಯೋಜನೆಗಳ ಮೂಲಕ ಸಂಸ್ಕರಿಸಿದ ಒಟ್ಟು 15.5 ಟಿಎಂಸಿ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುತ್ತಿದ್ದೇವೆ ಎಂದರು.</p>.<p>ಎರಡು ಹಂತಗಳಲ್ಲಿ ಈ ಯೋಜನೆ ಜಾರಗೆ ತರಲು ಉದ್ದೇಶಿಸಿದ್ದೇವೆ. ಮೊದಲನೆ ಹಂತದಲ್ಲಿ 317 ಕೆರೆಗಳಿಗೆ ₹2,809 ಕೋಟಿ ವೆಚ್ಚದಲ್ಲಿ ಸಂಸ್ಕರಿಸಿದ ನೀರು ಹರಿಸಲಾಗಿದೆ. ಎರಡನೇ ಹಂತದಲ್ಲಿ ₹1,699 ಕೋಟಿ ವೆಚ್ಚದಲ್ಲಿ 392 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.</p>.<p>ಮೊದಲನೆ ಹಂತದಲ್ಲಿ ಹೊಸಕೋಟೆಯ 38 ಕೆರೆಗಳಿಗೆ ಸುಮಾರು ₹150 ಕೋಟಿ ವೆಚ್ಚದಲ್ಲಿ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಹೋಬಳಿಗಳಿಗೂ ನೀರು ಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದ್ದೇವೆ ಎಂದರು.</p>.<p><strong>ನಾಲ್ಕು ತಾಲ್ಲೂಕನ್ನು ಉಪನಗರವಾಗಿಸಿ: ಮುನಿಯಪ್ಪ</strong></p><p>ಜಿಲ್ಲೆಯ ನಾಲ್ಕೂ ತಾಲ್ಲೂಕನ್ನು ಉಪ ನಗರವಾಗಿ ಅಭಿವೃದ್ಧಿಗೊಳಿಸಿ ಮೆಟ್ರೊ ಕಾವೇರಿ ನೀರು ಕೊಡಬೇಕು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾಗಿ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು.</p><p> ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರು ಒದಗಿಸಬೇಕು. ಈ ಭಾಗದಲ್ಲಿ 5 ಸಾವಿರ ಕೆರೆಗಳಿವೆ. ಇವುಗಳಿಗೆ ಸಮಗ್ರ ಯೊಜನೆ ಮಾಡಿ ಹೂಳು ತೆಗೆದು ಕೆರೆ ತುಂಬಿಸುವ ಕೆಲಸ ಆಗಬೇಕಿದೆ. ಅದಾದಲ್ಲಿ ಅಂತರ್ಜಲ ತಂತಾನೆ ವೃದ್ಧಿಯಾಗುತ್ತದೆ. ಆಗ ಕೃಷಿಯನ್ನೇ ನಂಬಿರುವ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>