ಮೃತ ಪೌರಕಾರ್ಮಿಕನಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಇಲ್ಲಿನ ಅಶೋಕನಗರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಿಂಗಪುರಕ್ಕೆ ಹೋಗಿ ಬಂದಿದ್ದ ಪೌರಕಾರ್ಮಿಕ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ತರಬೇತಿಗಾಗಿ ಸಿಂಗಪುರಕ್ಕೆ ಕಳುಹಿಸಿದ್ದ ತಂಡದಲ್ಲಿ ಪೌರ ಕಾರ್ಮಿಕ ಸೀನಪ್ಪ ಕೂಡಾ ಹೋಗಿ ಬಂದಿದ್ದರು. ಪಟ್ಟಣದಲ್ಲೂ ಕೂಡಾ ಸಿಂಗಪುರದಲ್ಲಿ ಕಲಿತಿರುವುದನ್ನು ಅನುಷ್ಠಾನಗೊಳಿಸುವ ಕನಸು ಹೊತ್ತುಕೊಂಡಿದ್ದರು.