<p><strong>ದಾಬಸ್ ಪೇಟೆ:</strong> ಸೋಂಪುರ ಹೋಬಳಿಯಲ್ಲಿ ಮೇವಿನ ಜೋಳ ಬೆಳೆದಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಕಡೆ ಮಳೆಯಿಲ್ಲದೆ ಮೇವಿನ ಜೋಳದ ಗಿಡಗಳು ಒಣಗುತ್ತಿವೆ. ಇನ್ನೊಂದೆಡೆ, ಸೈನಿಕ ಹುಳಗಳು ಮೇವಿನ ಜೋಳದ ಗಿಡಗಳ ಸುಳಿಯನ್ನೇ ತಿನ್ನುತ್ತಿವೆ.</p>.<p>ಕಳೆದ ವರ್ಷ ಕೆಲವೆಡೆ ಮುಸುಕಿನ ಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಾಡಿತ್ತು. ಆದರೆ, ಈ ಬಾರಿ ನೆಲಮಂಗಲ ತಾಲ್ಲೂಕಿನ ಉದ್ದಕ್ಕೂ ವ್ಯಾಪಿಸಿಕೊಂಡಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಪೂರ್ವಮುಂಗಾರು ಮಳೆ ಪ್ರತಿವರ್ಷಕ್ಕಿಂತ ಸರಾಸರಿ ಕಡಿಮೆ ಪ್ರಮಾಣದಲ್ಲಿ ಬಿದ್ದಿದೆ. ಹಲವು ರೈತರು ಒಂದೆರಡು ಮಳೆಗೆ ಭೂಮಿ ಹಸನು ಮಾಡಿಕೊಂಡು ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದರು.</p>.<p>‘ಕಳೆದ ವರ್ಷ ರಾಗಿ ಬೆಳೆ ಚೆನ್ನಾಗಿ ಆಗಿರಲಿಲ್ಲ. ಇದರಿಂದಾಗಿ, ಮೇವಿನ ಕೊರತೆ ಕಾಣಿಸಿಕೊಂಡಿತ್ತು. ಈ ಸಲ ಮೇವಿಗಾಗಿ ರೈತರು ಜೋಳ ಬಿತ್ತನೆ ಮಾಡಿದ್ದರು. ಅದಕ್ಕೂ ಹುಳು ಬಿದ್ದಿದ್ದು, ಮೇವಿನ ಕೊರತೆ ಉಂಟಾಗಲಿದೆ’ ಎಂದು ರೈತ ಯೋಗೇಶ್ ಹೇಳಿದರು.</p>.<p>‘ಕ್ವಿಂಟಲ್ ಜೋಳಕ್ಕೆ ₹1,200 ಕೊಟ್ಟು ಬಿತ್ತನೆ ಮಾಡಿದ್ದೆವು. ಮಳೆಯಿಲ್ಲದೆ ಜೋಳದ ಬೆಳವಣಿಗೆ ಕುಂಠಿತವಾಗಿತ್ತು. ಈಗ ಹುಳುಗಳು ಸುಳಿಯನ್ನೇ ತಿಂದು ಹಾಕುತ್ತಿವೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದರು.</p>.<p>‘ಜೋಳಕ್ಕೆ ಯಾವುದೇ ಔಷಧ ಸಿಂಪಡಿಸಬಾರದು. ಆದರೂ ಹುಳು ಹೆಚ್ಚಾಗಿದ್ದರೆ, ಎಕೋಲೆಕ್ಸ್ ಔಷಧಿಯನ್ನು ಒಂದು ಲೀಟರ್ಗೆ 2 ಎಂಎಲ್ನಷ್ಟು ಹಾಕಿ ಆದಷ್ಟು ಸುಳಿಗೆ ಬೀಳುವಂತೆ ಸ್ಪ್ರೇ ಮಾಡಬೇಕು. ಆಗ ನಿಯಂತ್ರಿಸಬಹುದು’ ಎಂದು ಸೋಂಪುರ ಕೃಷಿ ಅಧಿಕಾರಿ ಆನಂದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ:</strong> ಸೋಂಪುರ ಹೋಬಳಿಯಲ್ಲಿ ಮೇವಿನ ಜೋಳ ಬೆಳೆದಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಕಡೆ ಮಳೆಯಿಲ್ಲದೆ ಮೇವಿನ ಜೋಳದ ಗಿಡಗಳು ಒಣಗುತ್ತಿವೆ. ಇನ್ನೊಂದೆಡೆ, ಸೈನಿಕ ಹುಳಗಳು ಮೇವಿನ ಜೋಳದ ಗಿಡಗಳ ಸುಳಿಯನ್ನೇ ತಿನ್ನುತ್ತಿವೆ.</p>.<p>ಕಳೆದ ವರ್ಷ ಕೆಲವೆಡೆ ಮುಸುಕಿನ ಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಾಡಿತ್ತು. ಆದರೆ, ಈ ಬಾರಿ ನೆಲಮಂಗಲ ತಾಲ್ಲೂಕಿನ ಉದ್ದಕ್ಕೂ ವ್ಯಾಪಿಸಿಕೊಂಡಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಪೂರ್ವಮುಂಗಾರು ಮಳೆ ಪ್ರತಿವರ್ಷಕ್ಕಿಂತ ಸರಾಸರಿ ಕಡಿಮೆ ಪ್ರಮಾಣದಲ್ಲಿ ಬಿದ್ದಿದೆ. ಹಲವು ರೈತರು ಒಂದೆರಡು ಮಳೆಗೆ ಭೂಮಿ ಹಸನು ಮಾಡಿಕೊಂಡು ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದರು.</p>.<p>‘ಕಳೆದ ವರ್ಷ ರಾಗಿ ಬೆಳೆ ಚೆನ್ನಾಗಿ ಆಗಿರಲಿಲ್ಲ. ಇದರಿಂದಾಗಿ, ಮೇವಿನ ಕೊರತೆ ಕಾಣಿಸಿಕೊಂಡಿತ್ತು. ಈ ಸಲ ಮೇವಿಗಾಗಿ ರೈತರು ಜೋಳ ಬಿತ್ತನೆ ಮಾಡಿದ್ದರು. ಅದಕ್ಕೂ ಹುಳು ಬಿದ್ದಿದ್ದು, ಮೇವಿನ ಕೊರತೆ ಉಂಟಾಗಲಿದೆ’ ಎಂದು ರೈತ ಯೋಗೇಶ್ ಹೇಳಿದರು.</p>.<p>‘ಕ್ವಿಂಟಲ್ ಜೋಳಕ್ಕೆ ₹1,200 ಕೊಟ್ಟು ಬಿತ್ತನೆ ಮಾಡಿದ್ದೆವು. ಮಳೆಯಿಲ್ಲದೆ ಜೋಳದ ಬೆಳವಣಿಗೆ ಕುಂಠಿತವಾಗಿತ್ತು. ಈಗ ಹುಳುಗಳು ಸುಳಿಯನ್ನೇ ತಿಂದು ಹಾಕುತ್ತಿವೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದರು.</p>.<p>‘ಜೋಳಕ್ಕೆ ಯಾವುದೇ ಔಷಧ ಸಿಂಪಡಿಸಬಾರದು. ಆದರೂ ಹುಳು ಹೆಚ್ಚಾಗಿದ್ದರೆ, ಎಕೋಲೆಕ್ಸ್ ಔಷಧಿಯನ್ನು ಒಂದು ಲೀಟರ್ಗೆ 2 ಎಂಎಲ್ನಷ್ಟು ಹಾಕಿ ಆದಷ್ಟು ಸುಳಿಗೆ ಬೀಳುವಂತೆ ಸ್ಪ್ರೇ ಮಾಡಬೇಕು. ಆಗ ನಿಯಂತ್ರಿಸಬಹುದು’ ಎಂದು ಸೋಂಪುರ ಕೃಷಿ ಅಧಿಕಾರಿ ಆನಂದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>