ನೂಲು ಬಿಚ್ಚಾಣಿಕೆದಾರ (ರೀಲರ್) ನಿಸಾರ್ ಮಾತನಾಡಿ, ಸಾಲ ಮಾಡಿ ಇಲ್ಲಿಂದ ಗೂಡು ಖರೀದಿಸಿ ನೂಲು ಬಿಚ್ಚಾಣಿಕೆ ಮಾಡಿ ಇಟ್ಟಿದ್ದೇವೆ. ಅದಕ್ಕೆ ಬೆಲೆ ಇಲ್ಲದೇ ಮಾರಾಟ ಮಾಡಲಿಕ್ಕೂ ಸಾಧ್ಯವಾಗಿಲ್ಲ. ಮನೆಗಳಲ್ಲಿದ್ದ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದೇವೆ. ಕೈ ಸಾಲಗಳು ಹೆಚ್ಚಾಗಿವೆ. ಸರ್ಕಾರ, ದುಡಿಮೆಗೆ ಬಂಡವಾಳ ಕೊಡುವುದಾಗಿ ಹೇಳಿತ್ತು. ಅದನ್ನೂ ಕೊಡಲಿಲ್ಲ ಎಂದು ಹೇಳಿದರು.