ಪ್ರಸ್ತುತ ದೇಶದಲ್ಲಿ ಶೇ60ರಷ್ಟು ಕುಟುಂಬಗಳು ನ್ಯಾಯಬೆಲೆಯಲ್ಲಿ ಸಿಗುವ ಪಡಿತರ ಧಾನ್ಯ ಅವಲಂಭಿಸಿ ಜೀವನ ನಡೆಸುತ್ತಿವೆ. ಭೂಮಿ ಖರೀದಿಸುವ ಖಾಸಗಿ ಕಂಪನಿಗಳು ಆಹಾರ ಧಾನ್ಯ ಬೆಳೆಯುವುದಿಲ್ಲ. ಹಣ್ಣು, ಹೂವು, ತರಕಾರಿ ಜಮೀನು ಕೊಟ್ಟ ರೈತರಿಂದ ಬೆಳೆಸಿ ವಿದೇಶಗಳಿಗೆ ರಪ್ತು ಮಾಡುತ್ತವೆ. ಆಹಾರ ಧಾನ್ಯ ಬೆಳೆದರೂ ದುಪ್ಪಟ್ಟು ಬೆಲೆಗೆ ಖರೀದಿಸಬೇಕಾಗುತ್ತದೆ. ಪಡಿತರ ಧಾನ್ಯಗಳ ವಿತರಣೆ ಸ್ಥಗಿತಗೊಳ್ಳಲಿದೆ ಎಂದು ಅವರು ಹೇಳಿದರು.