ವಿಜಯಪುರ: ಪಟ್ಟಣದ 19ನೇ ವಾರ್ಡ್ನ ಮದರಸ ಜಾಮೀಯಾ ದಾವುಲ್ ರೆಹಸಾನ್ ಮಸೀದಿ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜವನ್ನು ಪುರಸಭೆ ಸದಸ್ಯ ರವಿ ನೆರವೇರಿಸಿದರು.
ಪುರಸಭೆ ಸದಸ್ಯ ರವಿ ಮಾತನಾಡಿ, ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯದಲ್ಲಿ ಜಾತಿ, ಮತ, ಧರ್ಮ ಎಂಬ ಬೇಧಬಾವವಿಲ್ಲ. ಎಲ್ಲ ಧರ್ಮೀಯರೂ ರಾಷ್ಟ್ರವನ್ನು ಪ್ರೀತಿಸಬೇಕು. ರಾಷ್ಟ್ರದ ಅಭಿವೃದ್ಧಿ ಮತ್ತು ಏಕತೆಗಾಗಿ ದುಡಿಯಬೇಕು ಎಂದರು.
ಮಸೀದಿಯ ಸಮಿತಿ ಸದಸ್ಯ ಮೌಲಾನಾ ನಜೀರ್ ಅಹಮದ್ ಮಾತನಾಡಿ, ಹಲವರು ಜಾತಿ, ಮತ, ಬೇಧ ಮರೆತು ಹೋರಾಟ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾಗಿರುವ ಹೊಣೆಗಾರಿಕೆ ಯುವಕರ ಮೇಲಿದೆ ಎಂದರು. ಮುಖಂಡರಾದ ಶಹಬುದ್ಧಿನ್, ಇನಾಯಿತ್ ಉಲ್ಲಾ, ನಿಸಾರ್ ಅಹಮದ್ ಇದ್ದರು.