200ಕ್ಕೂ ಹೆಚ್ಚು ಜನರ ಹಣವನ್ನು ಮಂಜುನಾಥ್ ದುರುಪಯೋಗ ಮಾಡಿಕೊಂಡಿದ್ದಾರೆ. ಹಂದೇನಹಳ್ಳಿ ಗ್ರಾಮವೊಂದರಲ್ಲೇ ₹70 ಲಕ್ಷಕ್ಕೂ ಹೆಚ್ಚು ವಂಚನೆಯಾಗಿದೆ. ವೃದ್ಧೆ ಸರೋಜಮ್ಮಗೆ ಸೇರಿದ ₹ 10ಲಕ್ಷ, ಮುನಿವೆಂಕಟಮ್ಮಗೆ ಸೇರಿದ ₹ 5 ಲಕ್ಷ, ಯಲ್ಲಮ್ಮ ಎಂಬುವರ ₹1.30 ಲಕ್ಷ, ಶೋಭಾ ಅವರ ₹1.10 ಲಕ್ಷ, ಮುನಿರತ್ನಮ್ಮ ₹1.30 ಲಕ್ಷ ಠೇವಣಿ ಹಣವನ್ನು ಲಪಟಾಯಿಸಿದ್ದಾರೆ ಎನ್ನಲಾಗಿದೆ.