ಬರಗಾಲದ ನಡುವೆಯೂ ವಿಜೃಂಬಣೆಯ ಜಾತ್ರೆ ಮತ್ತು ರಥೋತ್ಸವಗಳು ಜರುಗುತ್ತಿವೆ. ಗ್ರಾಮಗಳಲ್ಲಿ ತಮಟೆ ಕಲಾವಿದರ ದೊಡ್ಡ ತಂಡಗಳನ್ನು ಕರೆಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ನೆರೆ ಜಿಲ್ಲೆಗಳಿಂದ ಕಲಾವಿದರನ್ನು ಕರೆಸಲಾಗುತಿದೆ. ದೊಡ್ಡ ತಂಡ, ವಿಭಿನ್ನ ವಾದ್ಯಗಳಿಗೆ ಅವಲಂಭಿಸುತ್ತಿದ್ದು, ಸ್ಥಳೀಯ ಕಲಾವಿದರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.