<p><strong>ಹೊಸಕೋಟೆ:</strong> ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡ ನಲ್ಲಾಲ ಗ್ರಾಮದ ತೋಟವೊಂದರಲ್ಲಿ ಕಟಾವಿಗೆ ಬಂದಿದ್ದ ಒಂದು ಎಕರೆಯಷ್ಟು ಟೊಮೆಟೊ ಬೆಳೆಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ನಾಶಪಡಿಸಿದ್ದಾರೆ.</p>.<p>ಬಸವರಾಜಪ್ಪ ಎಂಬುವರ ತೋಟದಲ್ಲಿ ಕಟಾವಿಗೆ ಬಂದಿದ್ದ ಟೊಮೆಟೊ ಬೆಳೆಗೆ ಆಸರೆಯಾಗಿ ನಿಲ್ಲಿಸಿದ್ದ ಕಡ್ಡಿ ಮತ್ತು ತಂತಿಯನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದಾರೆ. ಇದರಿಂದ ಕಟಾವಿಗೆ ಬಂದಿದ್ದ ಒಂದು ಎಕೆರೆ ಟೊಮೆಟೊ ಗಿಡ ನೆಲಕ್ಕುರುಳಿದ್ದು, ಹಣ್ಣು, ಕಾಯಿ ಉದುರಿ ಹೋಗಿವೆ.</p>.<p>‘ಹಳೆಯ ರಾಜಕೀಯ ವೈಷಮ್ಯದಿಂದ ಗ್ರಾಮದ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ. ಬೆಳೆದು ನಿಂತಿದ್ದ ಟೊಮೆಟೊ ಬೆಳೆ ನೆಲಕ್ಕೆ ಉರುಳಿದ್ದು ಸುಮಾರು ₹3 ಲಕ್ಷ ಬಂಡವಾಳ, ಸುಮಾರು ₹8–₹10 ಲಕ್ಷ ಆದಾಯ ನಷ್ಟವಾಗಿದೆ’ ಎಂದು ರೈತ ಬಸವರಾಜಪ್ಪ ತಿಳಿಸಿದ್ದಾರೆ.</p>.<p>‘ಸ್ಯಾಂಪಲ್ ಟೊಮೆಟೊ ಕೀಳಲು ಸಿದ್ಧವಾಗಿದ್ದೆ. ಮಂಗಳವಾರ ರಾತ್ರಿ ತೋಟಕ್ಕೆ ನುಗ್ಗಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡ ನಲ್ಲಾಲ ಗ್ರಾಮದ ತೋಟವೊಂದರಲ್ಲಿ ಕಟಾವಿಗೆ ಬಂದಿದ್ದ ಒಂದು ಎಕರೆಯಷ್ಟು ಟೊಮೆಟೊ ಬೆಳೆಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ನಾಶಪಡಿಸಿದ್ದಾರೆ.</p>.<p>ಬಸವರಾಜಪ್ಪ ಎಂಬುವರ ತೋಟದಲ್ಲಿ ಕಟಾವಿಗೆ ಬಂದಿದ್ದ ಟೊಮೆಟೊ ಬೆಳೆಗೆ ಆಸರೆಯಾಗಿ ನಿಲ್ಲಿಸಿದ್ದ ಕಡ್ಡಿ ಮತ್ತು ತಂತಿಯನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದಾರೆ. ಇದರಿಂದ ಕಟಾವಿಗೆ ಬಂದಿದ್ದ ಒಂದು ಎಕೆರೆ ಟೊಮೆಟೊ ಗಿಡ ನೆಲಕ್ಕುರುಳಿದ್ದು, ಹಣ್ಣು, ಕಾಯಿ ಉದುರಿ ಹೋಗಿವೆ.</p>.<p>‘ಹಳೆಯ ರಾಜಕೀಯ ವೈಷಮ್ಯದಿಂದ ಗ್ರಾಮದ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ. ಬೆಳೆದು ನಿಂತಿದ್ದ ಟೊಮೆಟೊ ಬೆಳೆ ನೆಲಕ್ಕೆ ಉರುಳಿದ್ದು ಸುಮಾರು ₹3 ಲಕ್ಷ ಬಂಡವಾಳ, ಸುಮಾರು ₹8–₹10 ಲಕ್ಷ ಆದಾಯ ನಷ್ಟವಾಗಿದೆ’ ಎಂದು ರೈತ ಬಸವರಾಜಪ್ಪ ತಿಳಿಸಿದ್ದಾರೆ.</p>.<p>‘ಸ್ಯಾಂಪಲ್ ಟೊಮೆಟೊ ಕೀಳಲು ಸಿದ್ಧವಾಗಿದ್ದೆ. ಮಂಗಳವಾರ ರಾತ್ರಿ ತೋಟಕ್ಕೆ ನುಗ್ಗಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>