ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಮೇಳೆಕೋಟೆ ಸುತ್ತಮುತ್ತಲಿನ ಗ್ರಾಮಗಳ ರೈತರ ತೋಟಗಳಲ್ಲಿ ತೆಂಗಿನ ಗರಿ, ಮಾವಿನ ಸೊಪ್ಪು ಕಳವು ಮಿತಿಮೀರಿದೆ. ಮಳೆಕೋಟೆ ಗ್ರಾಮವೊಂದರಲ್ಲೇ ನಂಜೇಗೌಡ, ನಾರಾಯಣಪ್ಪ, ಮೋಹನ್, ಲಕ್ಷ್ಮಮ್ಮ ಎಂಬುವರ ತೋಟಗಳಲ್ಲಿನ ತೆಂಗಿನ ಮರಗಳು ಗರಿಗಳಿಲ್ಲದೆ ಬೋಳಾಗಿ ನಿಂತಿವೆ. ಬೆಂಗಳೂರಿನಲ್ಲಿ ಜೋಡಿ ತೆಂಗಿನ ಗರಿಗೆ ₹ 250 ದರ ನಿಗದಿಪಡಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಈ ದರ ₹ 300 ದಾಟುತ್ತದೆ. ಹಾಗಾಗಿ, ರಾತ್ರೋರಾತ್ರಿ ಕಳವು ಮಾಡಲಾಗುತ್ತಿದೆ ಎಂಬುದು ರೈತರ ದೂರು.