ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಹನ ಚಾಲಕರು ವಾಟರ್ ಮನ್, ತ್ಯಾಜ್ಯ ಸಹಾಯಕರು, ಡಾಟಾ ಆಪರೇಟರ್ಗಳು ಸೇರಿದಂತೆ ಹತ್ತು ಸಾವಿರಕ್ಕು ಹೆಚ್ಚು ಮಂದಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ. ಯಾವುದೇ ಸೇವಾಭದ್ರತೆಯಿಲ್ಲದ ಈ ನೌಕರರನ್ನು ಮನಸೋ ಇಚ್ಛೆ ದುಡಿಸಿಕೊಂಡು ಕೆಲಸದಿಂದ ಕೈ ಬಿಡುವ ಪ್ರವೃತ್ತಿ ಇದೆ. ಬಹಳಷ್ಟು ಕಡೆ ಕನಿಷ್ಠ ವೇತನ ಭವಿಷ್ಯ ನಿಧಿ ಕ್ರಮವಾಗಿ ಪಾವತಿಯಾಗುತ್ತಿಲ್ಲ. ಸರಿಪಡಿಸಬೇಕಾದ ಕಾರ್ಮಿಕ ಇಲಾಖೆ ಕುರುಡಾಗಿದೆ ಎಂದು ದೂರಿದರು.