<p><strong>ಹೊಸಕೋಟೆ:</strong> ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆ ಸಂಬಂಧ ನಗರದ ಅಂಬೇಡ್ಕರ್ ವಸತಿನಿಲಯದ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಪೂರ್ವಭಾವಿ ಸಭೆ ನಡೆಸಿದವು.</p>.<p>ಜನವರಿ 1 ಬೆಳಗ್ಗೆ ಮೆರವಣಿಗೆ ಮತ್ತು ಭೀಮ ಕೊರೆಗಾಂವ್ ವಿಜಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು. ಕಾಲೇಜು ರಸ್ತೆಯಿಂದ ಮೋರ್, ಕೆಇಬಿ ಸರ್ಕಲ್ ಮೂಲಕ ತಾಲ್ಲೂಕು ಕಚೇರಿ ಅವರಣದವರೆಗೆ ಕೊರೆಂಗಾವ್ ವಿಜಯಸ್ತಂಭ ಹಿಡಿದು ಮೇರೆವಣಿಗೆ, <br>ತಾಲ್ಲೂಕು ಕಚೇರಿ ಆವರಣದಲ್ಲಿ ತೆರೆದ ಸಭೆ ನಡೆಸಲು ಅಗತ್ಯ ಸಿದ್ಧತೆ ಆರಂಭಿಸಲು ಚರ್ಚೆ ನಡೆಯಿತು. </p>.<p>ದಲಿತರ ಹಕ್ಕಿಗಾಗಿ ಹೋರಾಟ ಮಾಡಿ ತ್ಯಾಗ ಬಲಿದಾನ ಗೈದವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯದಂತೆ ಮಾಡಿದ ಈ ದೇಶದ ಇತಿಹಾಸಕಾರರಿಗೆ ಏನೆಂದು ಹೇಳಬೇಕೆಂದು ತಿಳಿಯುತ್ತಿಲ್ಲ. ಇನ್ನಾದರೂ ನಮ್ಮ ಸಮುದಾಯದ ಇತಿಹಾಸವನ್ನು ನಮ್ಮವರಿಗೆ ಮಾತ್ರವಲ್ಲ ಎಲ್ಲ ವರ್ಗಗಳಿಗೂ ತಿಳಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ಮಹಾಜನ ಸೇನೆಯ ಅಧ್ಯಕ್ಷ ಮಂಜುನಾಥ್ ಹೇಳಿದರು.</p>.<p>ಕಾರ್ಯಕ್ರಮಗಳನ್ನು ಆಯೋಜಿಸುವುವುದು ದೊಡ್ಡದಲ್ಲ. ನಮ್ಮವರ ಧ್ವನಿ ಗಟ್ಟಿಯಾಗಿಸಲು ನಾವೆಲ್ಲಾ ಒಗ್ಗೂಡಬೆಕಿದೆ. ಶಿಕ್ಷಣ, ಸಂಘಟನೆ, ಹೊರಾಟಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ದಲಿತ ಸಮುದಾಯವನ್ನು ಜಾಗೃತಗೊಳಿಸಬೇಕಿದೆ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಚಿನ್ನಸ್ವಾಮಿ ಹೇಳಿದರು.</p>.<div><blockquote>ಬಾಲ್ಯದಲ್ಲಿ ಮೇಲ್ವರ್ಗದ ಮನೆ ಮುಂದೆ ಬೊಗಸೆಯಲ್ಲಿ ನೀರು ಕುಡಿದ ನೋವು ನಮಗೆ ಗೊತ್ತಿದೆ. ನಮ್ಮ ಹಕ್ಕು ಪಡೆಯಲು ಕೊರೆಗಾಂವ್ ಹೋರಾಟ ನಮಗೆ ಅದರ್ಶವಾಗಬೇಕು </blockquote><span class="attribution">ಮುನಿರಾಜು ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆ ಸಂಬಂಧ ನಗರದ ಅಂಬೇಡ್ಕರ್ ವಸತಿನಿಲಯದ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಪೂರ್ವಭಾವಿ ಸಭೆ ನಡೆಸಿದವು.</p>.<p>ಜನವರಿ 1 ಬೆಳಗ್ಗೆ ಮೆರವಣಿಗೆ ಮತ್ತು ಭೀಮ ಕೊರೆಗಾಂವ್ ವಿಜಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು. ಕಾಲೇಜು ರಸ್ತೆಯಿಂದ ಮೋರ್, ಕೆಇಬಿ ಸರ್ಕಲ್ ಮೂಲಕ ತಾಲ್ಲೂಕು ಕಚೇರಿ ಅವರಣದವರೆಗೆ ಕೊರೆಂಗಾವ್ ವಿಜಯಸ್ತಂಭ ಹಿಡಿದು ಮೇರೆವಣಿಗೆ, <br>ತಾಲ್ಲೂಕು ಕಚೇರಿ ಆವರಣದಲ್ಲಿ ತೆರೆದ ಸಭೆ ನಡೆಸಲು ಅಗತ್ಯ ಸಿದ್ಧತೆ ಆರಂಭಿಸಲು ಚರ್ಚೆ ನಡೆಯಿತು. </p>.<p>ದಲಿತರ ಹಕ್ಕಿಗಾಗಿ ಹೋರಾಟ ಮಾಡಿ ತ್ಯಾಗ ಬಲಿದಾನ ಗೈದವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯದಂತೆ ಮಾಡಿದ ಈ ದೇಶದ ಇತಿಹಾಸಕಾರರಿಗೆ ಏನೆಂದು ಹೇಳಬೇಕೆಂದು ತಿಳಿಯುತ್ತಿಲ್ಲ. ಇನ್ನಾದರೂ ನಮ್ಮ ಸಮುದಾಯದ ಇತಿಹಾಸವನ್ನು ನಮ್ಮವರಿಗೆ ಮಾತ್ರವಲ್ಲ ಎಲ್ಲ ವರ್ಗಗಳಿಗೂ ತಿಳಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ಮಹಾಜನ ಸೇನೆಯ ಅಧ್ಯಕ್ಷ ಮಂಜುನಾಥ್ ಹೇಳಿದರು.</p>.<p>ಕಾರ್ಯಕ್ರಮಗಳನ್ನು ಆಯೋಜಿಸುವುವುದು ದೊಡ್ಡದಲ್ಲ. ನಮ್ಮವರ ಧ್ವನಿ ಗಟ್ಟಿಯಾಗಿಸಲು ನಾವೆಲ್ಲಾ ಒಗ್ಗೂಡಬೆಕಿದೆ. ಶಿಕ್ಷಣ, ಸಂಘಟನೆ, ಹೊರಾಟಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ದಲಿತ ಸಮುದಾಯವನ್ನು ಜಾಗೃತಗೊಳಿಸಬೇಕಿದೆ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಚಿನ್ನಸ್ವಾಮಿ ಹೇಳಿದರು.</p>.<div><blockquote>ಬಾಲ್ಯದಲ್ಲಿ ಮೇಲ್ವರ್ಗದ ಮನೆ ಮುಂದೆ ಬೊಗಸೆಯಲ್ಲಿ ನೀರು ಕುಡಿದ ನೋವು ನಮಗೆ ಗೊತ್ತಿದೆ. ನಮ್ಮ ಹಕ್ಕು ಪಡೆಯಲು ಕೊರೆಗಾಂವ್ ಹೋರಾಟ ನಮಗೆ ಅದರ್ಶವಾಗಬೇಕು </blockquote><span class="attribution">ಮುನಿರಾಜು ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>