‘ಚಿಮಣಿ ದೀಪದ ದಿನಮಾನಗಳಲ್ಲಿ ಜಾತ್ರೆ, ಹಬ್ಬ, ಹರಿದಿನಗಳಲ್ಲಿ ಬೈಲಾಟಗಳು ಗ್ರಾಮೀಣರಿಗೆ ಮನರಂಜನೆ ನೀಡಿ ಅವರಲ್ಲಿ ಭಕ್ತಿಯ ಬೀಜ ಬಿತ್ತುವುದಲ್ಲದೆ, ಜನರನ್ನು ಧರ್ಮದ ಪಥದತ್ತ ಸಾಗಿಸುವಷ್ಟು ಪ್ರಭಾವಶಾಲಿಯಾಗಿದ್ದವು. ಚಲನಚಿತ್ರ, ದೂರದರ್ಶನ ಬಂದ ನಂತರ ನಾಟಕ ಪ್ರದರ್ಶನ ಹಾಗೂ ರಂಗಭೂಮಿಯತ್ತ ಒಲವು ಕ್ಷೀಣಿಸತೊಡಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.