<p><strong>ಹೊಸಕೋಟೆ:</strong> ನಗರದ ಹೊರವಲಯದಲ್ಲಿರುವ ಜನಪದರು ರಂಗ ವೇದಿಕೆಯಲ್ಲಿ 96ನೇ ರಂಗಮಾಲೆ ಅಂಗವಾಗಿ ಬೆಂಗಳೂರಿನ ಥೇಮಾ ಥಿಯಟರ್ ವತಿಯಿಂದ ‘ಎಲ್ಎಸ್ಡಿ’ ನಾಟಕ ಪ್ರದರ್ಶನ ನಡೆಯಿತು.</p>.<p>ಎಸ್.ವಿ.ಕಶ್ಯಪ್ ಅವರು ರಚಿಸಿ, ಎಸ್.ವಿ.ಸುಷ್ಮಾ ಅವರು ನಿರ್ದೇಶನ ಮಾಡಿರುವ ಮೂರೇ ಮಹಿಳಾ ಕಲಾವಿದರು ಅಭಿನಯಿಸಿದ ವಿಭಿನ್ನ ಪ್ರಯೋಗದ ‘ಎಲ್ಎಸ್ಡಿ’ ಪ್ರೇಕ್ಷಕರಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿತು. ಪ್ರೇಕ್ಷಕರನ್ನು ನಗಿಸುತ್ತಲೇ ನೋವಿನ, ವಿಷಾದದ ಛಾಯೆಯು ಚಿಂತನೆಗೆ ನಾಟಕ ಸದ್ದಿಲ್ಲದೆ ಸಾಗುವಂತೆ ಮಾಡಿತ್ತು.</p>.<p>ಜಾಗತೀಕರಣದಿಂದ ಆದ ಆರ್ಥಿಕ ಪ್ರಗತಿ ಸಮಾಜದ ಒಂದು ವರ್ಗದವರನ್ನು ಸ್ಥಿತಿವಂತರಾಗಿಸುವ ನಡುವೆ ಕಸ ಮುಸರೆ ತೊಳೆಯುವ, ಮನೆ ಕೆಲಸ ಮಾಡುವ, ಬಡ ಹೆಣ್ಣು ಮಕ್ಕಳ ಆಸೆ ಆಕಾಂಕ್ಷೆಗಳು ಕನಸು ಕನವರಿಕೆ ಇರುವುದನ್ನು ಇದ್ದಂತೆಯೆ ಪ್ರದರ್ಶಿಸಿ ಪ್ರೇಕ್ಷಕರ ಮನ ತಟ್ಟಿತು.</p>.<p>‘ಎಲ್ಎಸ್ಡಿ’ ಅಂದರೆ ಲಕ್ಷ್ಮಿ, ಸರಸ್ವತಿ ಮತ್ತು ದುರ್ಗಿ ಎಂಬ ಮೂವರು ಮನೆ ಕೆಲಸದ ಮಹಿಳೆಯರ ಕತೆ. ಈ ಪಾತ್ರಗಳಿಗೆ ಸ್ನೇಹಾ ಕಪ್ಪಣ್ಣ ಮತ್ತು ಸುನೇತ್ರಾ ಪಂಡಿತ್ ಜೀವ ತುಂಬಿದ್ದರು. ಸುಷ್ಮಾ ಅವರು ನಾಟಕದ ವಿನ್ಯಾಸ ಮಾಡಿ ನಿರ್ದೇಶಿಸಿದ್ದರು.</p>.<p>ಜನಪದರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕಾಟಂ ನಲ್ಲೂರು ಪಾಪಣ್ಣ ನಿರ್ದೇಶಕರನ್ನು ಮತ್ತು ಕಲಾವಿದರನ್ನು ಸನ್ಮಾನಿಸಿದರು.</p>.<p>ಜನಪದರು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಸಿದ್ಧೇಶ್ವರ ನನಸುಮನೆ, ಎಂ.ಸುರೇಶ್, ವೇಂಕಟಾಚಲಪತಿ, ಮುನಿರಾಜು ಬಿದರೇಅಗ್ರಹಾರ, ತಾವರೇಕೆರೆ ಶಿವಕುಮಾರ್, ಬಸವರಾಜು, ಬಾಗೇಪಲ್ಲಿ ಕೃಷ್ಣಮೂರ್ತಿ, ಕೃಷ್ಣ ಸುರೇಶ, ರಾಜಣ್ಣ, ಜಿ.ಬಿ.ಚಂದ್ರಶೇಖರ್, ರಾಜಣ್ಣ, ಮಧುಸೂದನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ನಗರದ ಹೊರವಲಯದಲ್ಲಿರುವ ಜನಪದರು ರಂಗ ವೇದಿಕೆಯಲ್ಲಿ 96ನೇ ರಂಗಮಾಲೆ ಅಂಗವಾಗಿ ಬೆಂಗಳೂರಿನ ಥೇಮಾ ಥಿಯಟರ್ ವತಿಯಿಂದ ‘ಎಲ್ಎಸ್ಡಿ’ ನಾಟಕ ಪ್ರದರ್ಶನ ನಡೆಯಿತು.</p>.<p>ಎಸ್.ವಿ.ಕಶ್ಯಪ್ ಅವರು ರಚಿಸಿ, ಎಸ್.ವಿ.ಸುಷ್ಮಾ ಅವರು ನಿರ್ದೇಶನ ಮಾಡಿರುವ ಮೂರೇ ಮಹಿಳಾ ಕಲಾವಿದರು ಅಭಿನಯಿಸಿದ ವಿಭಿನ್ನ ಪ್ರಯೋಗದ ‘ಎಲ್ಎಸ್ಡಿ’ ಪ್ರೇಕ್ಷಕರಯನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿತು. ಪ್ರೇಕ್ಷಕರನ್ನು ನಗಿಸುತ್ತಲೇ ನೋವಿನ, ವಿಷಾದದ ಛಾಯೆಯು ಚಿಂತನೆಗೆ ನಾಟಕ ಸದ್ದಿಲ್ಲದೆ ಸಾಗುವಂತೆ ಮಾಡಿತ್ತು.</p>.<p>ಜಾಗತೀಕರಣದಿಂದ ಆದ ಆರ್ಥಿಕ ಪ್ರಗತಿ ಸಮಾಜದ ಒಂದು ವರ್ಗದವರನ್ನು ಸ್ಥಿತಿವಂತರಾಗಿಸುವ ನಡುವೆ ಕಸ ಮುಸರೆ ತೊಳೆಯುವ, ಮನೆ ಕೆಲಸ ಮಾಡುವ, ಬಡ ಹೆಣ್ಣು ಮಕ್ಕಳ ಆಸೆ ಆಕಾಂಕ್ಷೆಗಳು ಕನಸು ಕನವರಿಕೆ ಇರುವುದನ್ನು ಇದ್ದಂತೆಯೆ ಪ್ರದರ್ಶಿಸಿ ಪ್ರೇಕ್ಷಕರ ಮನ ತಟ್ಟಿತು.</p>.<p>‘ಎಲ್ಎಸ್ಡಿ’ ಅಂದರೆ ಲಕ್ಷ್ಮಿ, ಸರಸ್ವತಿ ಮತ್ತು ದುರ್ಗಿ ಎಂಬ ಮೂವರು ಮನೆ ಕೆಲಸದ ಮಹಿಳೆಯರ ಕತೆ. ಈ ಪಾತ್ರಗಳಿಗೆ ಸ್ನೇಹಾ ಕಪ್ಪಣ್ಣ ಮತ್ತು ಸುನೇತ್ರಾ ಪಂಡಿತ್ ಜೀವ ತುಂಬಿದ್ದರು. ಸುಷ್ಮಾ ಅವರು ನಾಟಕದ ವಿನ್ಯಾಸ ಮಾಡಿ ನಿರ್ದೇಶಿಸಿದ್ದರು.</p>.<p>ಜನಪದರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕಾಟಂ ನಲ್ಲೂರು ಪಾಪಣ್ಣ ನಿರ್ದೇಶಕರನ್ನು ಮತ್ತು ಕಲಾವಿದರನ್ನು ಸನ್ಮಾನಿಸಿದರು.</p>.<p>ಜನಪದರು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಸಿದ್ಧೇಶ್ವರ ನನಸುಮನೆ, ಎಂ.ಸುರೇಶ್, ವೇಂಕಟಾಚಲಪತಿ, ಮುನಿರಾಜು ಬಿದರೇಅಗ್ರಹಾರ, ತಾವರೇಕೆರೆ ಶಿವಕುಮಾರ್, ಬಸವರಾಜು, ಬಾಗೇಪಲ್ಲಿ ಕೃಷ್ಣಮೂರ್ತಿ, ಕೃಷ್ಣ ಸುರೇಶ, ರಾಜಣ್ಣ, ಜಿ.ಬಿ.ಚಂದ್ರಶೇಖರ್, ರಾಜಣ್ಣ, ಮಧುಸೂದನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>