<p><strong>ಆನೇಕಲ್: </strong>ಹಣ ದುಪ್ಪಟ್ಟು ಮಾಡಲು ಹೋಗಿ ನಿವೃತ್ತ ಸೈನಿಕರು ಸೇರಿದಂತೆ ಹಲವು ಮಂದಿ ಸಾರ್ವಜನಿಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಈಚೆಗೆ ನಡೆದಿದೆ. ತಾಲ್ಲೂಕಿನ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಅರುಣ್ ಕುಮಾರ್ ಮತ್ತು ತಂಡದವರು ಎಕೆ ಟ್ರೇಡರ್ಸ್ ಹೆಸರಿನಲ್ಲಿ ಯೂನಿವರ್ ಕಾಯಿನ್ ಕ್ರಿಪ್ಟೋಕರೆನ್ಸಿಯಲ್ಲಿ ಮನಿ ಡಬ್ಲಿಂಗ್ ನಡೆಸುತ್ತಿದ್ದರು. ಈ ತಂಡ ತಾಲ್ಲೂಕಿನ ಕೆಲವರಿಂದ ಹಣ ಹೂಡಿಕೆ ಮಾಡಿಸಿಕೊಂಡು ಗ್ರಾಹಕರಿಗೆ ವಂಚಿಸಿರುವ ಘಟನೆ ನಡೆದಿದೆ. ನಿವೃತ್ತ ಸೈನಿಕರನ್ನು ಟಾರ್ಗೆಟ್ ಮಾಡಿ ಹಣ ಹೂಡಿಕೆ ಮಾಡಿಸುತ್ತಿದ್ದರು ಎನ್ನಲಾಗಿದೆ. ಪ್ರಾರಂಭದಲ್ಲಿ ಹಣ ಹೂಡಿಕೆ ಮಾಡಿಸಿ ಭರವಸೆ ನೀಡಿದಂತೆ ಹಣ ಮರುಪಾವತಿ ಮಾಡುತ್ತಿದ್ದರು.</p>.<p>ಅರುಣ್ ಕುಮಾರ್ ಮತ್ತು ತಂಡ ಎಕೆ ಟ್ರೇಡರ್ಸ್ ಕಂಪನಿ ನಡೆಸುತ್ತಿದ್ದರು. ಯೂನಿವರ್ ಕಾಯಿನ್ ನಡೆಸಿ ₹77 ಸಾವಿರ ಪಾವತಿ ಮಾಡಿದರೆ ಐದು ತಿಂಗಳಲ್ಲಿ ₹1.2ಲಕ್ಷ ನೀಡುತ್ತಿದ್ದರು.</p>.<p>ವಂಚನೆಗೊಳಗಾದ ನಿವೃತ್ತರಾದ ಸೈನಿಕ ಗೋವಿಂದರಾಜು, ಸುಬ್ರಮಣ್ಯಂ, ವೆಂಕಟೇಶ್ ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಹಣ ದುಪ್ಪಟ್ಟು ಮಾಡಲು ಹೋಗಿ ನಿವೃತ್ತ ಸೈನಿಕರು ಸೇರಿದಂತೆ ಹಲವು ಮಂದಿ ಸಾರ್ವಜನಿಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಈಚೆಗೆ ನಡೆದಿದೆ. ತಾಲ್ಲೂಕಿನ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಅರುಣ್ ಕುಮಾರ್ ಮತ್ತು ತಂಡದವರು ಎಕೆ ಟ್ರೇಡರ್ಸ್ ಹೆಸರಿನಲ್ಲಿ ಯೂನಿವರ್ ಕಾಯಿನ್ ಕ್ರಿಪ್ಟೋಕರೆನ್ಸಿಯಲ್ಲಿ ಮನಿ ಡಬ್ಲಿಂಗ್ ನಡೆಸುತ್ತಿದ್ದರು. ಈ ತಂಡ ತಾಲ್ಲೂಕಿನ ಕೆಲವರಿಂದ ಹಣ ಹೂಡಿಕೆ ಮಾಡಿಸಿಕೊಂಡು ಗ್ರಾಹಕರಿಗೆ ವಂಚಿಸಿರುವ ಘಟನೆ ನಡೆದಿದೆ. ನಿವೃತ್ತ ಸೈನಿಕರನ್ನು ಟಾರ್ಗೆಟ್ ಮಾಡಿ ಹಣ ಹೂಡಿಕೆ ಮಾಡಿಸುತ್ತಿದ್ದರು ಎನ್ನಲಾಗಿದೆ. ಪ್ರಾರಂಭದಲ್ಲಿ ಹಣ ಹೂಡಿಕೆ ಮಾಡಿಸಿ ಭರವಸೆ ನೀಡಿದಂತೆ ಹಣ ಮರುಪಾವತಿ ಮಾಡುತ್ತಿದ್ದರು.</p>.<p>ಅರುಣ್ ಕುಮಾರ್ ಮತ್ತು ತಂಡ ಎಕೆ ಟ್ರೇಡರ್ಸ್ ಕಂಪನಿ ನಡೆಸುತ್ತಿದ್ದರು. ಯೂನಿವರ್ ಕಾಯಿನ್ ನಡೆಸಿ ₹77 ಸಾವಿರ ಪಾವತಿ ಮಾಡಿದರೆ ಐದು ತಿಂಗಳಲ್ಲಿ ₹1.2ಲಕ್ಷ ನೀಡುತ್ತಿದ್ದರು.</p>.<p>ವಂಚನೆಗೊಳಗಾದ ನಿವೃತ್ತರಾದ ಸೈನಿಕ ಗೋವಿಂದರಾಜು, ಸುಬ್ರಮಣ್ಯಂ, ವೆಂಕಟೇಶ್ ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>