ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯಾಧಿಕಾರಿ ಡಾ.ಉಮಾಶಂಕರ್ ಮಾತನಾಡಿ, ಜೈವಿಕ ಉದ್ಯಾನದಲ್ಲಿನ ಪಕ್ಷಿಗಳು ಮುಚ್ಚಿದ ಆವರಣದಲ್ಲಿವೆ. ಈ ಪಕ್ಷಿಗಳಿಗೆ ಹೊರಭಾಗದ ಪಕ್ಷಿಗಳ ಸಂಪರ್ಕವಿಲ್ಲ. ಪಕ್ಷಿಗಳಿಗೆ ಆಹಾರ ಪೂರೈಕೆ ಸಂದರ್ಭದಲ್ಲಿ ಪಕ್ಷಿ ಪಾಲಕರು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಸಸ್ಯಹಾರಿ ಪ್ರಾಣಿ ಸಫಾರಿಯಲ್ಲಿನ ಕೆರೆಗಳಿಗೆ ವಲಸೆ ಪಕ್ಷಿಗಳು ಬರುತ್ತವೆ. ಹಾಗಾಗಿ ಈ ಭಾಗದಲ್ಲಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.